Sarvothama Seva award:ರಾಜ್ಯ ಸರ್ಕಾರದ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಪರಿಷ್ಕೃತ ಮಾರ್ಗಸೂಚಿಗಳು
Sarvothama Seva award: ಪ್ರಸ್ತಾವನೆ: ಮೇಲಿನ ಕ್ರಮ ಸಂಖ್ಯೆ (1) ರ ದಿನಾಂಕ: 20-11-2012 ರಲ್ಲಿ ಓದಲಾದ ಆದೇಶದಲ್ಲಿ ಅತ್ಯುನ್ನತ ಸೇವೆಗೈದ / ಸಾಧನೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ದಿನಾಂಕ: 15-04-2013 ರ ತಿದ್ದುಪಡಿ ಆದೇಶದಲ್ಲಿ ರಾಜ್ಯ ಪ್ರಶಸ್ತಿಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಜಿಲ್ಲಾವಾರು ಪ್ರಶಸ್ತಿ ಆಯ್ಕೆ ಸಮಿತಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಮತ್ತು ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಒಳಗೊಂಡಂತೆ ಮೌಲ್ಯಮಾಪನ ಸಮಿತಿಯನ್ನು ರಚಿಸಿ ಆದೇಶಿಸಲಾಗಿತ್ತು. ಮೇಲಿನ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ: 07-12-2019 ರ ಆದೇಶದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪ್ರದಾನ ಮಾಡಲಾಗುತ್ತಿರುವ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಸಂಖ್ಯೆಯನ್ನು 6 ರಿಂದ 10ಕ್ಕೆ ಏರಿಸಲಾಗಿದೆ. ಮೇಲಿನ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ದಿನಾಂಕ: 03-01-2019 ರ ಆದೇಶದಲ್ಲಿ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಸಲ್ಲಿಸಿರುವ ನಾಮ ನಿರ್ದೇಶನಗಳನ್ನು ಪರಿಶೀಲಿಸಿ, ಅರ್ಹ ಅಧಿಕಾರಿ / ನೌಕರರನ್ನು ಆಯ್ಕೆ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪುನರ್ ರಚಿಸಲಾಗಿದೆ. ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ: 18-01-2021ರ ಆದೇಶದಲ್ಲಿ ಸರ್ಕಾರ ಪ್ರತಿ ವರ್ಷ ಏಪ್ರಿಲ್, 21 ರಂದು ನಾಗರಿಕ ಸೇವಾ ದಿನವನ್ನು “ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಯನ್ನಾಗಿ ಆಚರಿಸಲು ಹಾಗೂ ಈಗಾಗಲೇ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ನೀಡುತ್ತಿರುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಏಪ್ರಿಲ್, 21ರ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದು ಪ್ರದಾನ ಮಾಡಲು ಆದೇಶಿಸಿದೆ. ಮೇಲಿನ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ದಿನಾಂಕ: 17-06-2021ರ ಮನವಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸರ್ವೋತ್ತಮ ಸೇವಾ ಪ್ರಶಸ್ತಿಯ ಮಾರ್ಗಸೂಚಿಗಳಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯಾದ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರು ಕೋರಿರುತ್ತಾರೆ. ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಜಾರಿಗೆ ತಂದು ಹಲವು ವರ್ಷಗಳು ಕಳೆದಿರುವುದರಿಂದ ಈ ಹಿಂದೆ ಹೊರಡಿಸಲಾಗಿದ್ದ ಮಾರ್ಗಸೂಚಿಯಲ್ಲಿ ತಾಂತ್ರಿಕ ಬದಲಾವಣೆಗಳು ಸೇರಿದಂತೆ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಅಳವಡಿಸಬೇಕಾಗಿರುವ ಅಂಶಗಳನ್ನು ಪರಿಗಣಿಸಿ ಹಲವಾರು ಮಾರ್ಪಾಡು, ಸೇರ್ಪಡೆಗಳೊಂದಿಗೆ ಹೊಸ ಮಾರ್ಗಸೂಚಿಯನ್ನು ನೀಡಲು ನಿರ್ಣಯಿಸಿ ಕೆಳಕಂಡಂತೆ ಆದೇಶಿಸಿದೆ. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ (ಆಸು) 11 ಇಳಸು 2022, ಬೆಂಗಳೂರು, ದಿನಾಂಕ: 19-03-2022. ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಮಾರ್ಪಾಡು, ಸೇರ್ಪಡೆಗಳನ್ನು ಅಳವಡಿಸಿಕೊಳ್ಳಲು ಹೊಸ ಮಾರ್ಗಸೂಚಿಯು ಕೆಳಕಂಡಂತಿದೆ. 1) ಪ್ರತಿ ವರ್ಷ ನಾಗರಿಕ ಸೇವಾ ದಿನಾಚರಣೆ” ಯಂದು ಅಂದರೆ ಏಪ್ರಿಲ್, 21 ರಂದು “ರಾಜ್ಯ ಸರ್ಕಾರಿ ನೌಕರರ* ದಿನಾಚರಣೆಯನ್ನಾಗಿ ಆಚರಿಸಿ ಪ್ರಶಸ್ತಿಗಳನ್ನು ನೀಡುವುದು. 2) ಈ ಪ್ರಶಸ್ತಿಗಳನ್ನು ಎ, ಬಿ, ಸಿ ಮತ್ತು ಡಿ ವೃಂದದ ಖಾಯಂ ರಾಜ್ಯ ಸರ್ಕಾರಿ ನೌಕರರಿಗೆ ಕೆಳಕಂಡ ಕೆಲಸಗಳಿಗಾಗಿ ನೀಡತಕ್ಕದ್ದು. i. ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಯನ್ನು ತರುವ ಮೂಲಕ ನಾಗರಿಕರಿಗೆ ಗುಣಮಟ್ಟದ ಸೇವೆಯ ವಿತರಣೆ. ii. ನಾಗರಿಕ ಸೇವಾ ವ್ಯವಸ್ಥೆಯಲ್ಲಿ ಗುಣಾತ್ಮಕ, ನಾಗರಿಕ ಸ್ನೇಹಿ ಮತ್ತು ಭ್ರಷ್ಟಾಚಾರ ರಹಿತ ವಾತಾವರಣ ನಿರ್ಮಾಣ. ii. ಮೌಲ್ಯವರ್ಧಿತ ಸೇವೆ, ವೃದ್ಧಿ, ಮುಂದಾಳತ್ನ ಮತ್ತು ಚಲನಶೀಲಗಳ ರಚನೆ. iv. ನಾಗರಿಕರ ಅವಶ್ಯಕತೆಗನುಗುಣವಾಗಿ ವಿನೂತನ ಪದ್ಧತಿ ಅಳವಡಿಸುವುದು. V ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅತ್ಯುನ್ನತ ಕಾರ್ಯನಿರ್ವಹಣೆ. vi. ಸಹಜ ಕಾರ್ಯನಿರ್ವಹಣೆಯೊಂದಿಗೆ ನಾಗರಿಕರಿಗೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೀತಿಯ ಸೇವೆಗಳನ್ನು ಒದಗಿಸಿದವರನ್ನು ಮತ್ತು ಕಛೇರಿ ಪರಿಸರದಲ್ಲಿ ವಿಶೇಷ, ವಿಭಿನ್ನ ಸಾಧನೆಯನ್ನು ಮಾಡುವುದು. vii ಇಲಾಖೆ / ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತಂದು ಅದ್ಭುತವಾದ ರೀತಿಯಲ್ಲಿ ಗಣನೀಯ ಕಾರ್ಯನಿರ್ವಹಣೆ. viii, ವಿನೂತನತೆಯನ್ನು ಕಾರ್ಯರೂಪಕ್ಕೆ ತರುವುದು ಮತ್ತು ರಚನಾತ್ಮಕ ರೀತಿಯಲ್ಲಿ ಮುಂದಾಳತ್ವ ವಹಿಸುವಿಕೆ, ನಾಗರಿಕರಿಗೆ ನೀಡುವ ಸೇವೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡುವುದು. ix. ದೀರ್ಘ ಸಮಯದ ಫಲಿತಾಂಶ ಸಾಧನೆ. X. ನಿಗದಿತ ಫಲಿತಾಂಶ ಸಾಧನೆಗೆ ಸರಳೀಕೃತ ಕಾರ್ಯ ವಿಧಾನ ವ್ಯವಸ್ಥೆ. xi. ಸರ್ಕಾರ / ಸಾರ್ವಜನಿಕರ ಹಣದ ಉಳಿತಾಯ. 3) ಪ್ರತ್ಯೇಕವಾಗಿ ಪ್ರಶಸ್ತಿ ಯೋಜನೆಯನ್ನು ಹೊಂದಿರುವ ಒಳಾಡಳಿತ ಇಲಾಖೆ ಮತ್ತು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ, ಇಲಾಖೆಯ ಸಮವಸ್ತ್ರ ಅಧಿಕಾರಿ /ಸಿಬ್ಬಂದಿಗಳನ್ನು ಹೊರತುಪಡಿಸಿ ಹಾಗೂ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದವರನ್ನು ಪ್ರಶಸ್ತಿಗಾಗಿ ಪರಿಗಣಿಸುವುದು. 4) ಈ ಯೋಜನೆಯು ಭಾರತೀಯ ಸೇವಾ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. 5) ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಸಂಖ್ಯೆಯನ್ನು 30 ಕ ಏರಿಸಲಾಗಿದೆ. ಇದರಲ್ಲಿ ಈ ಮುಂಚೆ ಪ್ರಕಟಗೊಳಿಸಲಾಗುತ್ತಿದ್ದ ಇಲಾಖಾವಾರು ಪ್ರಶಸ್ತಿಗಳೂ ಸೇರಿದ್ದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಯವರು ಸಚಿವಾಲಯವು ಸೇರಿದಂತೆ ಆಯಾ ಇಲಾಖೆಗಳ ಇಬ್ಬರು ಅರ್ಹ ಅಭ್ಯರ್ಥಿಗಳನ್ನು (ಅಧಿಕಾರಿ / ನೌಕರರನ್ನು) ಆಯ್ಕೆ ಮಾಡಿ, ಶಿಫಾರಸ್ಸಿನೊಂದಿಗೆ ಅವರ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೇರವಾಗಿ ರಾಜ್ಯ ಮಟ್ಟದ ಆಯ್ಕೆ ಸಮಿತಿಗೆ ಕಳುಹಿಸಬಹುದಾಗಿದೆ. ಇಬ್ಬರಿಗಿಂತ ಹೆಚ್ಚು ಹೆಸರುಗಳನ್ನು ಶಿಫಾರಸ್ಸು ಮಾಡುವಂತಿಲ್ಲ. ರಾಜ್ಯ ಮಟ್ಟದ ಪ್ರಶಸ್ತಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಆಯ್ಕೆ ಸಮಿತಿಯ ತೀರ್ಮಾನ ಅಂತಿಮವಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು ನಿಮ್ಮಿಕರಿಸಲು ರಾಜ್ಯ ಮಟ್ಟದ ಸಮಿತಿಯು ಸ್ವತಂತ್ರವಿರುತ್ತದೆ. 6) ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಗರಿಷ್ಠ ಎರಡು (2) ಹೆಸರುಗಳನ್ನು ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಸೂಕ್ತ ಶಿಫಾರಸ್ಸಿನೊಂದಿಗೆ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿತವಾದ ರಾಜ್ಯ ಮಟ್ಟದ ಆಯ್ಕೆ ಸಮಿತಿಗೆ ಸಲ್ಲಿಸಬೇಕು. ನಿಗದಿತ ನಮೂನೆಯಲ್ಲಿ ಎಲ್ಲಾ ರೀತಿಯ ಪರಿಶೀಲನೆಯ ನಂತರ ಅಂತಿಮ ದಿನಾಂಕವಾದ ಏಪ್ರಿಲ್, 4ನೇ ತಾರೀಖಿನ ಒಳಗಾಗಿ ಶಿಫಾರಸ್ಸುಗಳನ್ನು ಕಳುಹಿಸಬೇಕು. 7) ಈ ಪ್ರಶಸ್ತಿಗೆ ನಾಮನಿರ್ದೇಶನವನ್ನು ನಿಗದಿತ ಪ್ರಪತ್ರದಲ್ಲಿ ಸ್ವಯಂ ನಾಮನಿರ್ದೇಶನ ಅಥವಾ ಆ ಕಾರ್ಯ ತಿಳಿದಿರುವ ವ್ಯಕ್ತಿಯಿಂದ ನಾಮನಿರ್ದೇಶನ ಸಲ್ಲಿಸಬಹುದು. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಲವು ನಾಮ ನಿರ್ದೇಶನಗಳನ್ನು ಸ್ವೀಕರಿಸಿದಲ್ಲಿ, ಅವುಗಳನ್ನು ಆ ವರ್ಷದ ಒಂದು ನಾಮನಿರ್ದೇಶನವೆಂದು ಪರಿಗಣಿಸಲಾಗುವುದು. ಜಿಲ್ಲಾ ಮಟ್ಟ / ರಾಜ್ಯ ಮಟ್ಟದ ಸಮಿತಿಯಲ್ಲಿ ಮೇಲಿನ ಕಂಡಿಕೆ 2 ರಲ್ಲಿ ನಮೂದಿಸಿರುವ ಸಕಾರಣಗಳಿಗಾಗಿ /ಮಾನದಂಡಗಳನ್ವಯ ಅಭ್ಯರ್ಥಿಯನ್ನು ಪರಿಗಣಿಸುವುದು. 8) ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ಅಂಶಗಳು ಕಡ್ಡಾಯವಾಗಿರುತ್ತವೆ. ರಾಜ್ಯ / ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಸೇವೆ ಪೂರೈಸಿರಬೇಕು (ಪರೀಕ್ಷಾರ್ಥ ಅವಧಿ ಘೋಷಣೆ ಸಹಿತ). • ಪ್ರಶಸ್ತಿಗೆ ಆಯ್ಕೆಯಾಗುವ ಸರ್ಕಾರಿ ನೌಕರರ ವಿರುದ್ಧ ಯಾವುದೇ ಇಲಾಖಾ ವಿಚಾರಣೆಗಳು / ಕ್ರಿಮಿನಲ್ ಸ್ವರೂಪದ ಯಾವುದೇ ಪ್ರಕರಣಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಯಾವುದೇ ಸರ್ಕಾರಿ ನೌಕರರು ರಾಜ್ಯ / ಜಿಲ್ಲಾ ಮಟ್ಟದ ಪ್ರಶಸ್ತಿಗಳಲ್ಲಿ ಈಗಾಗಲೇ ಒಂದು ಪ್ರಶಸ್ತಿಯನ್ನು ಪಡೆದಿದ್ದಲ್ಲಿ ಪುನಃ ಅದೇ ಪ್ರಶಸ್ತಿಯನ್ನು ಪಡೆಯಲು ಅರ್ಹರಿರುವುದಿಲ್ಲ. 9) ಪ್ರಶಸ್ತಿಗೆ ಆಯ್ಕೆಯಾದವರಿಗೆ ಗುಣಮಟ್ಟದ ಸ್ಮರಣಿಕೆ / ನೆನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರದೊಂದಿಗೆ ಗೌರವಿಸಲಾಗುವುದು. ಕಂಡಿಕೆ 2 ರಲ್ಲಿ ನಮೂದಿಸಿರುವ ಮಾನದಂಡಗಳನ್ನು ಅನ್ವಯಿಸಿ ಮೊದಲ ಹಂತದ ಹಾಗೂ ನಂತರದ ಹಂತದ ಗುರಿ ಸಾಧನೆಯ ಪರಿಶೀಲನೆ ಅತಿ ಮುಖ್ಯವಾಗಿದ್ದು, ಇದನ್ನು ಮೌಲ್ಯಮಾಪನ ಸಮಿತಿಯಲ್ಲಿ ಪರಿಶೀಲಿಸಲಾಗುವುದು. ಈ ಯೋಜನೆ ಅಡಿ ಪ್ರಶಸ್ತಿ ಪುರಸ್ಕಾರವನ್ನು ಎರಡು ಹಂತದಲ್ಲಿ ನೀಡಲಾಗುವುದು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ಗೆ ಸೇರಿ.