KARTET-2025 NOTES- Contributions of Cholas: ಚೋಳರ ಕೊಡುಗೆಗಳು-

KARTET-2025 NOTES- Contributions of Cholas: ಚೋಳರ ಕೊಡುಗೆಗಳು-

KARTET-2025 NOTES- ಆಡಳಿತ ಪದ್ಧತಿ :ಚೋಳರು ವಿಶಾಲ ಸಾಮ್ರಾಜ್ಯವನ್ನು ನಿರ್ಮಿಸಿ ಉತ್ತಮ ಆಡಳಿತ ವ್ಯವಸ್ಥೆಯನ್ನು ಸಂಘಟಿಸಿದ್ದರು. “ಚೋಳರ ಆಡಳಿತ ಪದ್ಧತಿ ಕಾಲಮಾನದ ದೃಷ್ಟಿಯಿಂದ ಅತ್ಯಂತ ಉತ್ತಮ ವ್ಯವಸ್ಥೆಯಿಂದ ಕೂಡಿದ್ದು ಜನಪ್ರಿಯವಾಗಿದ್ದು ವಿಕೇಂದ್ರಿಕರಣಕ್ಕೆ ಹೆಸರಾಗಿತ್ತು” ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಚೋಳ ಅರಸರು ಶಾಸನಬದ್ದ ಮತ್ತು ನೀತಿಯುತ ರಾಜ್ಯಭಾರಕ್ಕೆ ಹೆಸರಾಗಿದ್ದಾರೆ. ವಿಶಾಲವಾದ ಸಾಮ್ರಾಜ್ಯವನ್ನು ಆಳಲು ಅಲ್ಲಲ್ಲಿ ರಾಜಧಾನಿ ಗಳನ್ನು ನಿರ್ಮಿಸಿದ್ದರು. ತಂಜಾವೂರು, ಗಂಗೈಕೊಂಡ ಚೋಳಪುರಂ, ಮುಡಿಕೊಂಡನ್ ಮತ್ತು ಕಾಂಚಿಗಳು ಇವರ ಪ್ರಮುಖ ರಾಜಧಾನಿಗಳಾಗಿದ್ದವು. ಇವರು ಆಡಳಿತ ವ್ಯವಸ್ಥೆಯನ್ನು ಕೇಂದ್ರಾಡಳಿತ, ಪ್ರಾಂತಾಡಳಿತ, ಗ್ರಾಮಾಡಳಿತ ಎಂದು ವಿಭಾಗಿಸಿದ್ದರು.

ಕೇಂದ್ರಾಡಳಿತ :

ರಾಜನು ಕೇಂದ್ರಸರ್ಕಾರದ ಕೇಂದ್ರಬಿಂದುವಾಗಿದ್ದು, ಪರಮಾಧಿಕಾರವನ್ನು ಹೊಂದಿ ದ್ದನು. ಸರ್ವಧಿಕಾರವನ್ನು ಅವನೇ ನಿಯಂತ್ರಿಸುತ್ತಿದ್ದರೂ, ನಿರಂಕುಶ ವಾಗಿ ವರ್ತಿಸುತ್ತಿರಲಿಲ್ಲ. ಅರಸೋತ್ತಿಗೆಯು ಅನುವಂಶಿಕವಾಗಿದ್ದರಿಂದ ರಾಜನಾಗುವವನು ಯೋಗ್ಯ ಶಿಕ್ಷಣ ಪಡೆದಿರ ಬೇಕಾಗುತ್ತಿತ್ತು. ರಾಜನಾಗುವವನನ್ನು ಮೊದಲೇ ಯುವರಾಜನೆಂದು ನೇಮಿಸಿ, ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿತ್ತು. ಅನೇಕ ಚೋಳ ಅರಸರು ಅರಸರಾಗುವ ಮೊದಲು ಅನೇಕ ವರ್ಷಗಳ ಕಾಲ ಯುವರಾಜರಾಗಿ ರಾಜ್ಯಭಾರ ಮಾಡಿದ ಉದಾಹರಣೆಗಳಿವೆ. ರಾಜನಿಗೆ ಸಲಹೆ ನೀಡಲು ಸಲಹಾ ಸಮಿತಿ ಅಥವಾ ಮಂತ್ರಿ ಮಂಡಲವಿರುತ್ತಿತ್ತು ಅದು ರಾಜ ಕುಮಾರರು, ಸಚಿವರು, ದಂಡನಾಯಕರು ಮತ್ತು ಮಂತ್ರಿ ಮಂಡಲಾಧಿಪತಿಗಳನ್ನು ಒಳಗೊಂಡಿತ್ತು.

ಆಡಳಿತ ನಿರ್ವಹಣೆಗಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವಿತ್ತು. ಅರಸನಿಗೆ ಪ್ರತೇಕ ಅಧಿಕಾರಿ ವರ್ಗವಿದ್ದು, ಅದನ್ನು ‘ಉದನಕುಟುರ’ ಎಂದು ಕರೆಯಲಾಗುತ್ತಿತ್ತು. ಅರಸನ ರಕ್ಷಣೆಗೆ ಅಂಗರಕ್ಷಕ ಪಡೆ ಇರುತ್ತಿತ್ತು ಅರಸನು ಮೇಲಿಂದ ಮೇಲೆ ನಗರ ಸಂಚಾರ ಕೈಕೊಳ್ಳುತ್ತಿದ್ದನು. ಪಟ್ಟಣಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದನು. ಧಾನ, ಧರ್ಮಗಳಲ್ಲದೇ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದನು. ನ್ಯಾಯಾಂಗ, ಹಣಕಾಸು, ವಿದೇಶಾಂಗ, ಭೂ ಸೈನ್ಯ, ನೌಕಾ ಸೈನ್ಯಗಳ ಅಧಿಕಾರವು ಕೇಂದ್ರಸರಕಾರದ ನೇರ ಆಡಳಿತಕ್ಕೆ ಒಳಪಡುತ್ತಿದ್ದವು.

ಸೈನ್ಯಾಡಳಿತ :

ಚೋಳರು ಬಲಿಷ್ಠವಾದ ಸೇನಾಬಲವನ್ನು ಹೊಂದಿದ್ದರು. ಅದು ಭೂ ಸೈನ್ಯ ಮತ್ತು ನೌಕಾ ಪಡೆಯನ್ನು ಒಳಗೊಂಡಿತ್ತು. ಇವುಗಳಲ್ಲಿ ನೌಕಾ ಪಡೆಯೇ ಪ್ರಬಲವಾಗಿತ್ತು. ಭೂ ಸೈನ್ಯವು 70 ಶಾಖೆ (ದಳ)ಗಳನ್ನು ಒಳಗೊಂಡಿತ್ತು. ಪ್ರತಿ ಶಾಖೆಗೆ ಒಬ್ಬ ಪ್ರತೇಕ ಅಧಿಕಾರಿ ಇರುತ್ತಿದ್ದನು. ರಾಜನು ಸೈನ್ಯದ ಸರ್ವೋಚ್ಚ ದಂಡನಾಯಕನಾಗಿದ್ದನು. ಚೋಳರ ಶಾಶ್ವತ ಸೈನ್ಯವು ಕಾಲ್ಗಳ, ಗಜದಳ ಮತ್ತು ಅಶ್ವದಳಗಳನ್ನು ಒಳಗೊಂಡಿತ್ತು. ಕಾಲ್ದಳವು ಬಿಲ್ಲುಗಾರರನ್ನು, ಖಡ್ಗದಾರಿಗಳನ್ನು ಒಳಗೊಂಡಿತ್ತು. ಸೈನಿಕರ ತರಬೇತಿ ಮತ್ತು ಶಿಸ್ತಿಗೆ ಹೆಚ್ಚಿನ ಗಮನ ಕೊಡಲಾಗಿತ್ತು ಸೈನಿಕರಿಗೆ ತರಬೇತಿ ನೀಡಲು ತರಬೇತಿ ಕೇಂದ್ರಗಳು, ಆಯುಧಾಗಾರಗಳಿದ್ದವು. ಯುದ್ಧದಲ್ಲಿ ವಿಶೇಷ ಪರಾಕ್ರಮ ಮೆರೆದ ಸೈನಿಕರನ್ನು, ತುಕುಡಿಗಳನ್ನು ಮತ್ತು ಆನೆಗಳಿಗೆ ರಾಜರು ಬಿರುದುಗಳನ್ನು ನೀಡಿ ಗೌರವಿಸುತ್ತಿದ್ದರು. ಚೋಳರು 60,000 ಆನೆಗಳನ್ನೊಳಗೊಂಡ ಬೃಹತ್ ಗಜಪಡೆಯನ್ನು ಹೊಂದಿದ್ದರು. ಚೋಳರು ಪ್ರಬಲ ನೌಕಾಪಡೆಯನ್ನು ಹೊಂದಿದ್ದರು. ಸಿಂಹಳ, ಶ್ರೀವಿಜಯ ಮಲಯ ದ್ವೀಪ, ಚೇರ ಮತ್ತು ಅರಬ್ಬಿಸಮುದ್ರ ಹಾಗೂ ಬಂಗಾಲ ಕೊಲ್ಲಿಯ ಅನೇಕ ದ್ವೀಪಗಳ ಮೇಲೆ ವಿಜಯ ಸಾಧಿಸಲು ಅವರ ಬಲಾಡ್ಯ ನೌಕಾ ಪಡೆಯೇ ಕಾರಣವಾಗಿತ್ತು. ಸೇನಾ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಸೇನಾಪತಿ, ದಂಡನಾಯಕ ಮತ್ತು ಮಹಾದಂಡನಾಯಕರನ್ನು ನೇಮಿಸಲಾಗಿತ್ತು.

ಪ್ರಾಂತಾಡಳಿತ :

ಚೋಳರು ಆಡಳಿತದ ದಕ್ಷತೆಗಾಗಿ ಹಾಗೂ ಅನಕೂಲಕ್ಕಾಗಿ ಚಕ್ರಾಧಿಪತ್ಯವನ್ನು ಮಂಡಲ ಅಥವಾ ಪ್ರಾಂತ್ಯಗಳನ್ನಾಗಿ ವಿಂಗಡಿಸಿದ್ದರು. ಇವರ ಮಂಡಲಗಳ ಸಂಖ್ಯೆ ನಿಖರವಾಗಿ ತಿಳಿಯುವುದಿಲ್ಲವಾದರೂ, ಒಂದನೆಯ ರಾಜರಾಜನ ಕಾಲದಲ್ಲಿ ಚೋಳ ಸಾಮ್ರಾಜ್ಯವನ್ನು 8 ಮಂಡಲಂಗಳಲ್ಲಿ ವಿಂಗಡಿಸಲಾಗಿತ್ತು.

ಮಂಡಲಗಳನ್ನು ರಾಜರ ಹೆಸರು ಇಲ್ಲವೆ ಬಿರುದುಗಳಿಂದ ಹೆಸರಿಸಿ ‘ಮುಮ್ಮಡಿ ಚೋಳಮಂಡಲ’, ‘ಜಗನ್ನಾಥ ಮಂಡಲ’, ‘ರಾಜರಾಜಚೋಳ ಮಂಡಲ’, ‘ಗಂಗೈಕೊಂಡ ಚೋಳಪುರರ’, ‘ಮುದಿಗೊಂಡ ಚೋಳ ಮಂಡಲ’ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕಾಂಚಿಯನ್ನು ಕಾಂಚಿಮಂಡಲ’ ವೆಂದು ಕರೆಯಲಾಗಿದೆ.

ಇವುಗಳ ಆಡಳಿತವನ್ನು ಯುವರಾಜರು ಇಲ್ಲವೆ ರಾಜನ ರಕ್ತಸಂಬಂಧಿಗಳು ನೋಡಿಕೊಳ್ಳುತ್ತಿ ದ್ದರು. ಇವರನ್ನೂ “ಮಂಡಲ ಪಾಲಕ’ ಎಂದು ಕರೆಯಲಾಗುತ್ತಿತ್ತು. ವೆಂಗಿ ಮತ್ತು ಮಧುರಾ ಪ್ರಾಂತಗಳನ್ನು ರಾಜಕುಮಾರರೇ ನೋಡಿಕೊಳ್ಳುತ್ತಿದ್ದರು.

ಪ್ರತಿ ಮಂಡಲವು ಸೈನ್ಯವನ್ನು ಹಾಗೂ ಆಡಳಿತಾಧಿಕಾರಿಗಳನ್ನು ಒಳಗೊಂಡಿರುತ್ತಿತ್ತು. ಮಂಡಲವನ್ನು ನಾಡುಗಳನ್ನಾಗಿಯೂ, ನಾಡುಗಳನ್ನು ಒಳನಾಡುಗಳನ್ನಾಗಿಯೂ ವಿಂಗಡಿಸಲಾಗಿತ್ತು. ನಾಡು ಗ್ರಾಮ (ಕೊಟಂ) ಗಳನ್ನು ಒಳಗೊಂಡಿರುತ್ತಿತ್ತು. ಗ್ರಾಮವೇ ಆಡಳಿತದ ಕೊನೆಯ ಘಟಕವಾಗಿತ್ತು.

ಗ್ರಾಮಾಡಳಿತ :

ಆಡಳಿತ ಕ್ಷೇತ್ರದಲ್ಲಿ ಚೋಳರ ವಿಶಿಷ್ಟ ಕೊಡಗೆಯೆಂದರೆ ಗ್ರಾಮಗಳ ಆಂತರಿಕ ಸ್ವಾಯತ್ತತೆ. ಈ ರೀತಿಯ ಗ್ರಾಮ ಸಭೆಗಳ ಆಡಳಿತ ಪದ್ಧತಿ ಕ್ರಿ.ಶ. 8ನೇ ಶತಮಾನದಲ್ಲಿ ಪಲ್ಲವರ ಮತ್ತು ಪಾಂಡ್ಯರ ಕಾಲದಲ್ಲಿ ರೂಢಿಯಲ್ಲಿತ್ತಾದರೂ, ಚೋಳರ ಕಾಲದಲ್ಲಿ ಈ ಪದ್ಧತಿಯು ಪರಿಪೂರ್ಣತೆಯನ್ನು ತಲುಪಿತು. ಚೋಳರ ಶಾಸನಗಳು ಕ್ರಿ.ಶ. 10ನೇಯ ಶತಮಾನದಲ್ಲಿ ಸಭಾ ಮತ್ತು ಸಮಿತಿಯೊಂದಿಗೆ ಸಾಕಷ್ಟು ಅಭಿವೃದ್ಧಿಗೊಂಡು ಪೂರ್ಣ ಬೆಳವಣಿಗೆಯನ್ನು ಹೊಂದಿದ್ದವೆಂದು ಹೇಳುತ್ತವೆ.

ಇಂತಹ ಸಭೆಗಳು ‘ನಾಡು’ ಮತ್ತು ನಗರರ ಗಳಲ್ಲಿಯೂ ಸಹ ಇದ್ದವು. ಆದರೆ ಗ್ರಾಮಗಳಲ್ಲಿದ್ದ ಸಭೆಗಳೇ ಅತ್ಯಂತ ವಿಶಾಲವಾದ, ಪರಿಪೂರ್ಣವಾದ ಕಾರ್ಯವ್ಯಾಪ್ತಿಯನ್ನು ಹೊಂದಿದ್ದವು. ಇವುಗಳ ಮೂಲ ಉದ್ದೇಶ ಪ್ರತಿ ಗ್ರಾಮದ ಆಡಳಿತವನ್ನು ಆ ಗ್ರಾಮದ ಗ್ರಾಮಸ್ಥರೇ ನೋಡಿಕೊಳ್ಳಬೇಕೆಂಬುದಾಗಿತ್ತು ಈ ಉದ್ದೇಶಕ್ಕಾಗಿ ಪ್ರತಿ ಗ್ರಾಮದಲ್ಲಿ ‘ಉರ್’ ಮತ್ತು ‘ಸಭಾ” ಎಂಬ ಎರಡು ರೀತಿಯ ಸಂಸ್ಥೆಗಳಿದ್ದವು. ಇವು ಸಮಾಜದ ಪ್ರೌಢರನ್ನು ಸದಸ್ಯರನ್ನಾಗಿ ಹೊಂದಿದ್ದವು. ‘ಉರ್’ ಇದು ಸಾಮಾನ್ಯ ಸಭೆಯಾಗಿದ್ದು, ಬ್ರಾಹ್ಮಣರಿಗೆ ದತ್ತಿ ಕೊಡಲಾದ ಗ್ರಾಮಗಳಲ್ಲಿ ಕಂಡು ಬರುತ್ತದೆ. ‘ಸಭಾ’ ಬ್ರಾಹ್ಮಣರ ನೆಲೆಗಳ ಅಗ್ರಹಾರ ವಾಗಿದ್ದು, ಅದನ್ನು ‘ಚತುರ್ವೇದಿ ಮಂಗಳ ಎಂದು ಕರೆಯಲಾಗುತ್ತಿತ್ತು.

ಉತ್ತರ ಮೇರೂರು ಶಿಲಾಶಾಸನಗಳು ತಿಳಿಸುವಂತೆ ಗ್ರಾಮಾಡಳಿತ : ಉತ್ತರ ಮೇರೂರು (ಚಿಂಗಲ್‌ಪುಟ ಜಿಲ್ಲೆ) ಎಂಬ ಗ್ರಾಮದ ವೈಕುಂಠ ದೇವಾಲಯದ ಗೋಡೆಯ ಮೇಲೆ ಕೆತ್ತಲ್ಪಟ್ಟ ಎರಡು ಶಾಸನಗಳು ಚೋಳರ ಗ್ರಾಮಾಡಳಿತದ ಬಗ್ಗೆ ತಿಳಿಸುತ್ತವೆ. ಇವು ಒಂದನೆಯ ಪರಾಂತಕನ 12 ಮತ್ತು 14ನೆಯ ಆಳ್ವಿಕೆಯ ವರ್ಷಗಳಲ್ಲಿ (ಕ್ರಿ.ಶ. 919 ಮತ್ತು 921) ಹೊರಡಿಸಿದವುಗಳಾಗಿವೆ. ಮೊದಲನೆಯ ಶಾಸನವು ಸಭೆಯ ನೀತಿ ನಿಯಮಗಳನ್ನು ತಿಳಿಸುತ್ತದೆ.

ಎರಡನೆಯ ಶಾಸನವು ಮೊದಲನೆಯ ಶಾಸನಕ್ಕಿಂತ ಉತ್ತಮವಾದ ಮತ್ತು ಸುಧಾರಿಸಿದ ನೀತಿ ನಿಯಮಗಳನ್ನು, ಅವುಗಳ ವಿವರಣೆಯನ್ನು ತಿಳಿಸುತ್ತದೆ. ಕ್ರಿ.ಶ. 921ರಲ್ಲಿ ಹೊರಡಿಸಲಾದ ಶಾಸನದ ಪ್ರಕಾರ ಹಳ್ಳಿಯಲ್ಲಿರುವ 30 ವಿಭಾಗಗಳ (ವಾರ್ಡಗಳ) ಪೈಕಿ, ಪ್ರತಿಯೊಂದು ವಿಭಾಗವೂ ಒಂದೊಂದು ಅಭ್ಯರ್ಥಿಯನ್ನು ಅಂತಿಮ ಆಯ್ಕೆ ಗೋಸ್ಕರವಾಗಿ ನಾಮಕರಣ ಮಾಡಬೇಕಾಗಿತ್ತು. ಹೀಗೆ ನಾಮಕರಣಗೊಳ್ಳುವ ಅಭ್ಯರ್ಥಿಯು ಹೊಂದಿರ ಬೇಕಾದ ಅರ್ಹತೆ ಮತ್ತು ಆನರ್ಹತೆಗಳನ್ನು ಶಾಸನವು ಈ ಕೆಳಗಿನಂತೆ ತಿಳಿಸುತ್ತದೆ.

ಸದಸ್ಯರಿಗಿರಬೇಕಾದ ಅರ್ಹತೆಗಳು :

1. ಅಭ್ಯರ್ಥಿಯು ಕನಿಷ್ಠ ಒಂದು ಎಕರೆ ಜಮೀನಿನ ಮಾಲೀಕನಾಗಿರಬೇಕು. ಅಂದರೆ ಕನಿಷ್ಠ 1/4 ‘ಮೈಲಿ’ ತೆರಿಗೆ ಕೊಡುವಷ್ಟು ಜಮೀನು ಹೊಂದಿರಬೇಕಾಗುತ್ತಿತ್ತು.

2. ಗ್ರಾಮದಲ್ಲಿ ಸ್ವಂತ ಮನೆ ಹೊಂದಿದ್ದು, ಅದರಲ್ಲಿ ವಾಸವಾಗಿರಬೇಕು.

3. ಅಭ್ಯರ್ಥಿಯ ವಯಸ್ಸು 35 ವರ್ಷಗಳಿಗಿಂತ ಹೆಚ್ಚು ಮತ್ತು 70ಕ್ಕಿಂತ ಕಡಿಮೆ ಹೊಂದಿರಬೇಕು.

4. ಅಭ್ಯರ್ಥಿಯು ನಾಲ್ಕು ವೇದಗಳು ಇಲ್ಲವೇ ಉಪನಿಷತ್, ಮಂತ್ರ ಮತ್ತು ಬ್ರಾಹ್ಮಣ ಗಳ ಜ್ಞಾನ ಹೊಂದಿರಬೇಕು. ಇಲ್ಲವೇ ಒಂದು ವೇದ ಮತ್ತು ಒಂದು ಭಾಷೆಯಲ್ಲಿ ಪಾರಂಗತನಾಗಿರಬೇಕು.

5. ಈ ಮೇಲಿನ ಅರ್ಹತೆ ಹೊಂದಿರದಿದ್ದಲ್ಲಿ, ವ್ಯಾಪಾರವನ್ನು ಚೆನ್ನಾಗಿ ಬಲ್ಲವನಾಗಿರ ಬೇಕು. ಇಲ್ಲವೆ ಗುಣವಂತನು, ಪ್ರಾಮಾಣಿಕನು ಆಗಿರಬೇಕು.

ಅನರ್ಹತೆಗಳು : ಈ ಮೇಲಿನ ಅರ್ಹತೆಗಳನ್ನು ಹೊಂದಿದ್ದರೂ ಸಹ ಈ ಕೆಳಗಿನ ಅಭ್ಯರ್ಥಿಗಳು ಆಯ್ಕೆಯಾಗಲು ಅನರ್ಹರಾಗಿದ್ದರು.

1. ಅಭ್ಯರ್ಥಿಯು ಕಳೆದ ಮೂರು ವರ್ಷಗಳಿಂದ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿದ್ದರೆ ಪುನರಾಯ್ಕೆಗೆ ಅನರ್ಹನಾಗುತ್ತಿದ್ದನು.

2. ಅಭ್ಯರ್ಥಿಯು ಯಾವುದೇ ಒಂದು ಸಮಿತಿಯಲ್ಲಿದ್ದು ಸಮರ್ಪಕವಾದ ಲೆಕ್ಕ ಪತ್ರ ಗಳನ್ನೂ ಅದರ ಮಾಹಿತಿಯನ್ನು ಸಂಬಂಧಪಟ್ಟವರಿಗೆ ಕೊಡದೇ ಇದ್ದರೆ ಅಂತಹ ಅಭ್ಯರ್ಥಿ ಸ್ಪರ್ಧೆಗೆ ಅನರ್ಹನಾಗುತ್ತಿದ್ದನು. ಹಾಗೂ ಅವನ ಹತ್ತಿರದ ಸಂಬಂಧಿಗಳು ಸ್ಪರ್ಧೆಗೆ ಅನರ್ಹರಾಗುತ್ತಿದ್ದರು.

3. ಅಭ್ಯರ್ಥಿಯಾಗಲಿ, ಅವನ ಸಂಬಂಧಿಕರಾಗಲಿ ಕೀಳು ಜಾತಿಯವರೊಂದಿಗೆ ಬೆರೆತಿದ್ದರೆ, ಇಲ್ಲವೆ ಹಾದರ ಮಾಡಿದ್ದರೂ ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳದಿದ್ದರೆ ಅಂತಹ ಅಭ್ಯರ್ಥಿಗಳು ಸ್ಪರ್ಧೆಗೆ ಅನರ್ಹರಾಗುತ್ತಿದ್ದರು.

4. ಅಭ್ಯರ್ಥಿಯು ಅವಿವೇಕಿಯಾಗಿದ್ದು, ಇನ್ನೊಬ್ಬರ ಆಸ್ತಿಯನ್ನು ಲಪಟಾಯಿಸಿದ್ದರೆ, ಪ್ರತಿಬಂಧಿತವಾದ ಆಹಾರವನ್ನು ಸೇವಿಸಿದ್ದರೆ, ಹಂತವರು ಆಯ್ಕೆಗೆ ಅನರ್ಹ ರಾಗುತ್ತಿದ್ದರು.

5. ಅಭ್ಯರ್ಥಿಯ ಪಂಚ ಮಹಾಪಾಪಗಳಾದ ಬ್ರಾಹ್ಮಣ ಹತ್ಯ, ಮದ್ಯ ಸೇವನೆ, ಕಳ್ಳತನ ಮತ್ತು ವ್ಯಭಿಚಾರದ ಅಪರಾಧಗಳನ್ನು ಮಾಡಿದ್ದರೆ, ಅವನು ಮತ್ತು ಅವನ ಸಂಬಂಧಿಕರು ಸ್ಪರ್ಧೆಗೆ ಅನರ್ಹರಾಗುತ್ತಿದ್ದರು.

ಆಯ್ಕೆಯ ವಿಧಾನ : ಗ್ರಾಮ ಸಭೆಗೆ ಪ್ರತಿನಿಧಿಗಳನ್ನು ಆರಿಸಲು ಅನುಸರಿಸುತ್ತಿದ್ದ ಚುನಾವಣಾ ಪದ್ದತಿ ಕುತೂಹಲಕಾರಿಯಾಗಿತ್ತು. ಗ್ರಾಮವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗದಿಂದ ಒಬ್ಬೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತಿತ್ತು ಚುಣಾವಣೆಯು ಅದೃಷ್ಟ ಪರೀಕ್ಷಾ ಪದ್ಧತಿಯ ಮೂಲಕ ನಡೆಯುತ್ತಿತ್ತು. ಅದನ್ನು “ಕುಡುಮಲೈ ಪದ್ಧತಿ” ಎಂದು ಕರೆಯಲಾಗುತ್ತಿತ್ತು ಪ್ರತಿಯೊಂದು ವಿಭಾಗದಿಂದ ನಾಮಕರಣಗೊಂಡ ಯೋಗ್ಯ ಅಭ್ಯರ್ಥಿಗಳ ಹೆಸರುಗಳನ್ನು ತಾಳೆ ಗರಿಗಳ ಮೇಲೆ ಬರೆದು, ಆ ಎಲ್ಲ ತಾಳೆಗರಿಗಳನ್ನು ಒಂದು ಮಡಿಕೆಯಲ್ಲಿ ಹಾಕಿ, ನಂತರ ಸರಿಯಾಗಿ ಕಲುಕಿ, ಒಬ್ಬ ಚಿಕ್ಕ ಬಾಲಕ ಮೂಲಕ ಒಂದು ಗರಿಯನ್ನು ಎತ್ತಿಸುತ್ತಿದ್ದರು. ಅದರಲ್ಲಿರುವ ಹೆಸರನ್ನು ಓದಿ ಹೇಳುವ ಮೂಲಕ ಚುನಾಯಿತ ಸದಸ್ಯರ ಹೆಸರನ್ನು ಪ್ರಕಟಿಸಲಾಗುತ್ತಿತ್ತು ಇದೇ ರೀತಿ ಎಲ್ಲಾ ವಿಭಾಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು

ವಾರಿಯಮ್ಗಳು :

ಉತ್ತರ ಮೇರೂರು ಗ್ರಾಮವನ್ನು 30 ವಿಭಾಗಗಳಲ್ಲಿ ವಿಂಗಡಿಸಿ, ಪ್ರತಿಭಾಗದಿಂದ ಒಬ್ಬೊಬ್ಬರಂತೆ 30 ಜನ ಸದಸ್ಯರನ್ನು ಆಯ್ಕೆಮಾಡಲಾಗಿತ್ತು ಹೀಗೆ ಆಯ್ಕೆಗೊಂಡ ಸದಸ್ಯರನ್ನು ಗ್ರಾಮದ 3 ಸಮಿತಿಗಳಿಗೆ ನೇಮಿಸಲಾಗಿತ್ತು

1. ಸಂವತ್ಸರ ವಾರಿಯಮ್ (ವಾರ್ಷಿಕ ಸಮಿತಿ)ಗೆ 12 ಜನ ಸದಸ್ಯರನ್ನು ನೇಮಿಸಲಾಗುತ್ತಿತ್ತು. ಅವರು ವಯೋವೃದ್ದರೂ, ಅನುಭವಿಗಳೂ, ಜ್ಞಾನವಂತರ ಆಗಿದ್ದರು.
2. ತೊಟ್ಟವಾರಿಯಮ್ (ತೋಟ ಸಮಿತಿ)ಗೆ 12 ಜನ ಸದಸ್ಯರನ್ನು,

3. ಏರಿವಾರಿಯಮ್ (ಕೆರೆ ಸಮಿತಿ)ಗೆ 6ಜನ ಸದಸ್ಯರನ್ನು ನೇಮಿಸಲಾಗುತ್ತಿತ್ತು

ಇವುಗಳಲ್ಲದೇ ಇನ್ನೂ ಎರಡು ಸಮಿತಿಗಳಿದ್ದು ಅವುಗಳನ್ನು” ಪಂಚವಾರ” ಸಮಿತಿ ಮತ್ತು “ಪೊನ್ನವಾರಯಮ್” (ಚಿನ್ನದ ಸಮಿತಿ) ಎಂದು ಕರೆಯಲಾಗುತ್ತಿತ್ತು ಈ ಎರಡು ಸಮಿತಿಗಳಲ್ಲಿ ತಲಾ 6 ಸದಸ್ಯರಿರುತ್ತಿದ್ದರು. ಇವರ ಅಧಿಕಾರ ಅವಧಿ ಒಂದು ವರ್ಷವಾಗಿತ್ತು ಸಮಿತಿಯ ಸದಸ್ಯರನ್ನು “ವಾರಿಯ ಪೆರುಮಕ್ಕಳ್” ಎಂದು ಕರೆಯಲಾಗುತ್ತಿತ್ತು ಸಾಮಾನ್ಯವಾಗಿ ಸಭೆಗಳನ್ನು ದೇವಾಲಯ, ಕೆರೆಯ ದಂಡೆ, ದೊಡ್ಡ ಆಲದ ಮರದ ಕೆಳಗೆ ನಡೆಸಲಾಗುತ್ತಿತ್ತು.

ಸಮಿತಿಗಳ ಅಧಿಕಾರ ಹಾಗೂ ಕರ್ತವ್ಯಗಳು :

ಚೋಳರ ಕಾಲದಲ್ಲಿ ಗ್ರಾಮ ಸಮಿತಿಗಳು ಸಮರ್ಪಕವಾದ ಕೆಲಸಗಳನ್ನು ಮಾಡುತ್ತಿದ್ದವು. ಗ್ರಾಮದ ಶಾಂತಿ, ನ್ಯಾಯ ವಿಚಾರಣೆ, ನೀರಾವರಿ, ರಸ್ತೆವ್ಯವಸ್ಥೆ ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಸಂಪನ್ಮೂಲಗಳ ಅಭಿವೃದ್ಧಿ, ಸಾಂಸ್ಕೃತಿಕ ಪ್ರಗತಿ, ಭೂ ಕಂದಾಯವನ್ನು ನಿಗದಿಪಡಿಸುವುದು ಮತ್ತು ಸಂಗ್ರಹಿಸುವುದು, ಕಂದಾಯ ಕೊಡದವರ ಮೇಲೆ ಕ್ರಮ ಕೈಕೊಳ್ಳುವುದು, ಶಿಕ್ಷೆ ವಿಧಿಸುವುದು, ದೇವಾಲಗಳ ನಿರ್ಮಾಣ, ಕೆರೆಗಳ ನಿರ್ಮಾಣ ಮತ್ತು ಮೇಲ್ವಿಚಾರಣೆ, ಧಾರ್ಮಿಕ, ವೈದ್ಯಕೀಯ ಚಟುವಟಿಕೆ, ದಾನ-ದತ್ತಿಗಳ ಮೇಲ್ವಿಚಾರಣೆ ಹೀಗೆ ಗ್ರಾಮದ ಸಕಲ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರ ಹೊಂದಿದ ಸಂಸ್ಥೆಯಾಗಿತ್ತು.

ಕಂದಾಯ ಪದ್ಧತಿ :

ಚೋಳರ ಕಾಲದಲ್ಲಿ ಕಂದಾಯ ವ್ಯವಸ್ಥೆಯು ದಕ್ಷತೆಯಿಂದ ಕೂಡಿತ್ತು ಜಮೀನುಗಳ ಮೇಲೆ ವಿಧಿಸಿದ ಕಂದಾಯವೇ ರಾಜ್ಯದ ಮುಖ್ಯ ಆದಾಯವಾಗಿತ್ತು ಕಂದಾಯವನ್ನು ಧನ-ಧಾನ್ಯ ರೂಪದಲ್ಲಿ ಸಲ್ಲಿಸಬಹುದಿತ್ತು ಗ್ರಾಮಗಳಲ್ಲಿ ‘ಸಭೆ’ಗಳೇ ಕಂದಾಯವನ್ನು ವಸೂಲಿ ಮಾಡುತ್ತಿದ್ದವು. ಉತ್ಪನ್ನದ 1/3ರಷ್ಟು ರಾಜ್ಯದ ಬೊಕ್ಕಸಕ್ಕೆ ಕಂದಾಯ ವನ್ನು ಕೊಡಬೇಕಾಗಿತ್ತು ಜಮೀನನ್ನು ಮೋಜಣಿ ಮಾಡಿ ಕಂದಾಯದ ಪ್ರಮಾಣವನ್ನು ನಿಗದಿ ಪಡಿಸಲಾಗುತ್ತಿತ್ತು ರಾಜ್ಯಕ್ಕೆ ಸಂದಾಯವಾಗುವ ಇತರ ಆದಾಯವೆಂದರೆ, ಸುಂಕ, ತೆರಿಗೆ, ವಿವಿಧ ಉದ್ಯೋಗ ತೆರಿಗೆಗಳು, ಗಣಿಗಳು, ಅಡವಿ, ಉಪ್ಪು ಮುಂತಾದವುಗಳಿಂದ ಬರುವ ಆದಾಯ ಹೀಗೆ ಸಂಗ್ರಹವಾದ ಆದಾಯವನ್ನು ಅರಸ, ಅವನ ಆಸ್ಥಾನ, ಸೈನ್ಯ, ನೌಕಾಪಡೆ, ನೌಕರರ ಸಂಬಳ, ಆಡಳಿತ, ರಸ್ತೆಗಳ ನಿರ್ಮಾಣ-ದುರಸ್ತಿ, ನೀರಾವರಿ, ಕೆರೆ, ಕಾಲುವೆ, ನಾಲೆ ಮುಂತಾದವುಗಳಿಗಾಗಿ ಖರ್ಚು ಮಾಡಲಾಗುತ್ತಿತ್ತು.

ನ್ಯಾಯಾಂಗ ಪದ್ಧತಿ :

ಪ್ರತಿ ಗ್ರಾಮದಲ್ಲಿಯೂ ‘ನಾಯತ್ತಾರ್’ (ನ್ಯಾಯ ಸಮಿತಿ) ಎಂಬ ಸಮಿತಿಯು ನ್ಯಾಯಾಂಗ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿತ್ತು. ತಂಟೆ ತಕರಾರುಗಳನ್ನು ಬಗೆಹರಿಸುವುದು. ಅಪರಾಧಿಯನ್ನು ಗುರುತಿಸಿ ಶಿಕ್ಷೆಕೊಡುವುದು ಇದರ ಕೆಲಸವಾಗಿತ್ತು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿದವನಿಗೆ ಮರಣ ದಂಡನೆ, ಆಕಸ್ಮಾತ್ ಕೊಲೆಯಾದರೆ ಕೊಲೆಗಾರನಿಗೆ 16 ಆಕಳುಗಳನ್ನು ಕೊಡಬೇಕೆಂಬ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು ಮತ್ತು ಗ್ರಾಮದ ದೇವಾಲಯದಲ್ಲಿ ಕೊಲೆಗಾರನು ನಂದಾದೀಪವನ್ನು ಹಚ್ಚುವ ವ್ಯವಸ್ಥೆ ಮಾಡ ಬೇಕಾಗಿತ್ತು. ಹಾದರ, ಕಲಬೆರಕೆ, ಕಳವು ಮತ್ತು ಮೋಸ ಇಂತಹ ಗಂಭೀರವಾದ ಅಪರಾಧ ಗಳಿಗೆ ಕತ್ತೆಯ ಮೇಲೆ ಅಪರಾಧಿಯನ್ನು ಕುಳ್ಳರಿಸಿ ಮೆರವಣಿಗೆ ಮಾಡಿಸಲಾಗುತ್ತಿತ್ತು.


2. ತೊಟ್ಟವಾರಿಯಮ್ (ತೋಟ ಸಮಿತಿ)ಗೆ 12 ಜನ ಸದಸ್ಯರನ್ನು,

3. ಏರಿವಾರಿಯಮ್ (ಕೆರೆ ಸಮಿತಿ)ಗೆ 6ಜನ ಸದಸ್ಯರನ್ನು ನೇಮಿಸಲಾಗುತ್ತಿತ್ತು

ಇವುಗಳಲ್ಲದೇ ಇನ್ನೂ ಎರಡು ಸಮಿತಿಗಳಿದ್ದು ಅವುಗಳನ್ನು “ಪಂಚವಾರ” ಸಮಿತಿ ಮತ್ತು “ಪೊನ್ನವಾರಯಮ್” (ಚಿನ್ನದ ಸಮಿತಿ) ಎಂದು ಕರೆಯಲಾಗುತ್ತಿತ್ತು. ಈ ಎರಡು ಸಮಿತಿಗಳಲ್ಲಿ ತಲಾ 6 ಸದಸ್ಯರಿರುತ್ತಿದ್ದರು. ಇವರ ಅಧಿಕಾರ ಅವಧಿ ಒಂದು ವರ್ಷವಾಗಿತ್ತು ಸಮಿತಿಯ ಸದಸ್ಯರನ್ನು “ವಾರಿಯ ಪೆರುಮಕ್ಕಳ್’ ಎಂದು ಕರೆಯಲಾಗುತ್ತಿತ್ತು ಸಾಮಾನ್ಯವಾಗಿ ಸಭೆಗಳನ್ನು ದೇವಾಲಯ, ಕೆರೆಯ ದಂಡೆ, ದೊಡ್ಡ ಆಲದ ಮರದ ಕೆಳಗೆ ನಡೆಸಲಾಗುತ್ತಿತ್ತುal

ಸಮಿತಿಗಳ ಅಧಿಕಾರ ಹಾಗೂ ಕರ್ತವ್ಯಗಳು :

ಚೋಳರ ಕಾಲದಲ್ಲಿ ಗ್ರಾಮ ಸಮಿತಿಗಳು ಸಮರ್ಪಕವಾದ ಕೆಲಸಗಳನ್ನು ಮಾಡುತ್ತಿದ್ದವು. ಗ್ರಾಮದ ಶಾಂತಿ, ನ್ಯಾಯ ವಿಚಾರಣೆ, ನೀರಾವರಿ, ರಸ್ತೆವ್ಯವಸ್ಥೆ, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಸಂಪನ್ಮೂಲಗಳ ಅಭಿವೃದ್ಧಿ, ಸಾಂಸ್ಕೃತಿಕ ಪ್ರಗತಿ, ಭೂ ಕಂದಾಯವನ್ನು ನಿಗದಿಪಡಿಸುವುದು ಮತ್ತು ಸಂಗ್ರಹಿಸುವುದು, ಕಂದಾಯ ಕೊಡದವರ ಮೇಲೆ ಕ್ರಮ ಕೈಕೊಳ್ಳುವುದು, ಶಿಕ್ಷೆ ವಿಧಿಸುವುದು, ದೇವಾಲಗಳ ನಿರ್ಮಾಣ, ಕೆರೆಗಳ ನಿರ್ಮಾಣ ಮತ್ತು ಮೇಲ್ವಿಚಾರಣೆ, ಧಾರ್ಮಿಕ, ವೈದ್ಯಕೀಯ ಚಟುವಟಿಕೆ, ದಾನ-ದತ್ತಿಗಳ ಮೇಲ್ವಿಚಾರಣೆ ಹೀಗೆ ಗ್ರಾಮದ ಸಕಲ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರ ಹೊಂದಿದ ಸಂಸ್ಥೆಯಾಗಿತ್ತು.

ಕಂದಾಯ ಪದ್ಧತಿ :

ಚೋಳರ ಕಾಲದಲ್ಲಿ ಕಂದಾಯ ವ್ಯವಸ್ಥೆಯು ದಕ್ಷತೆಯಿಂದ ಕೂಡಿತ್ತು ಜಮೀನುಗಳ ಮೇಲೆ ವಿಧಿಸಿದ ಕಂದಾಯವೇ ರಾಜ್ಯದ ಮುಖ್ಯ ಆದಾಯವಾಗಿತ್ತು ಕಂದಾಯವನ್ನು ಧನ-ಧಾನ್ಯ ರೂಪದಲ್ಲಿ ಸಲ್ಲಿಸಬಹುದಿತ್ತು. ಗ್ರಾಮಗಳಲ್ಲಿ ‘ಸಭೆ’ ಗಳೇ ಕಂದಾಯವನ್ನು ವಸೂಲಿ ಮಾಡುತ್ತಿದ್ದವು. ಉತ್ಪನ್ನದ 1/3ರಷ್ಟು ರಾಜ್ಯದ ಬೊಕ್ಕಸಕ್ಕೆ ಕಂದಾಯ ವನ್ನು ಕೊಡಬೇಕಾಗಿತ್ತು ಜಮೀನನ್ನು ಮೋಜಣಿ ಮಾಡಿ ಕಂದಾಯದ ಪ್ರಮಾಣವನ್ನು ನಿಗದಿ ಪಡಿಸಲಾಗುತ್ತಿತ್ತು ರಾಜ್ಯಕ್ಕೆ ಸಂದಾಯವಾಗುವ ಇತರ ಆದಾಯವೆಂದರೆ, ಸುಂಕ, ತೆರಿಗೆ, ವಿವಿಧ ಉದ್ಯೋಗ ತೆರಿಗೆಗಳು, ಗಣಿಗಳು, ಅಡವಿ, ಉಪ್ಪು ಮುಂತಾದವುಗಳಿಂದ ಬರುವ ಆದಾಯ ಹೀಗೆ ಸಂಗ್ರಹವಾದ ಆದಾಯವನ್ನು ಅರಸ, ಅವನ ಆಸ್ಥಾನ, ಸೈನ್ಯ, ನೌಕಾಪಡೆ, ನೌಕರರ ಸಂಬಳ, ಆಡಳಿತ, ರಸ್ತೆಗಳ ನಿರ್ಮಾಣ- ದುರಸ್ತಿ, ನೀರಾವರಿ, ಕೆರೆ, ಕಾಲುವೆ, ನಾಲೆ ಮುಂತಾದವುಗಳಿಗಾಗಿ ಖರ್ಚು ಮಾಡಲಾಗುತ್ತಿತ್ತು.

ನ್ಯಾಯಾಂಗ ಪದ್ಧತಿ :

ಪ್ರತಿ ಗ್ರಾಮದಲ್ಲಿಯೂ ‘ನಾಯತ್ತಾರ್’ (ನ್ಯಾಯ ಸಮಿತಿ) ಎಂಬ ಸಮಿತಿಯು ನ್ಯಾಯಾಂಗ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿತ್ತು. ತಂಟೆ-ತಕರಾರುಗಳನ್ನು ಬಗೆಹರಿಸುವುದು. ಅಪರಾಧಿಯನ್ನು ಗುರುತಿಸಿ ಶಿಕ್ಷೆ ಕೊಡುವುದು ಇದರ ಕೆಲಸವಾಗಿತ್ತು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿದವನಿಗೆ ಮರಣ ದಂಡನೆ, ಆಕಸ್ಮಾತ್ ಕೊಲೆಯಾದರೆ ಕೊಲೆಗಾರನಿಗೆ 16 ಆಕಳುಗಳನ್ನು ಕೊಡಬೇಕೆಂಬ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು ಮತ್ತು ಗ್ರಾಮದ ದೇವಾಲಯದಲ್ಲಿ ಕೊಲೆಗಾರನು ನಂದಾದೀಪವನ್ನು ಹಚ್ಚುವ ವ್ಯವಸ್ಥೆ ಮಾಡ ಬೇಕಾಗಿತ್ತು ಹಾದರ, ಕಲಬೆರಕೆ, ಕಳವು ಮತ್ತು ಮೋಸ ಇಂತಹ ಗಂಭೀರವಾದ ಅಪರಾಧ ಗಳಿಗೆ ಕತ್ತೆಯ ಮೇಲೆ ಅಪರಾಧಿಯನ್ನು ಕುಳ್ಳರಿಸಿ ಮೆರವಣಿಗೆ ಮಾಡಿಸಲಾಗುತ್ತಿತ್ತು.

ಆರ್ಥಿಕ ವ್ಯವಸ್ಥೆ :

ಚೋಳರ ಕಾಲದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ವ್ಯಾಪಾರ ಕ್ಷೇತ್ರವು ಅಭಿವೃದ್ಧಿ ಹೊಂದಿತ್ತು ಚೋಳರು ದೇಶ-ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು. ಸಾಮ್ರಾಜ್ಯದಲ್ಲಿ ‘ಮಣೆಗ್ರಾಮಮ್’ ಮತ್ತು ‘ವಾಲಂಜಿಯರ್’ ಎಂಬ ವರ್ತಕ ಸಂಘಗಳಿದ್ದವು. ವ್ಯಾಪಾರದಲ್ಲಿ ಮಡೈ, ಪೋನ್, ಕಾಸು ಎಂಬ ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳನ್ನು ಬಳಸುತ್ತಿದ್ದರು. ಚೋಳ ಸಾಮ್ರಾಜ್ಯವು ಚೀನಾ, ಸುಮತ್ರಾ, ಜಾವಾ, ಆರೇಬಿಯಾ ಹಾಗೂ ಪರ್ಶಿಯನ್ ಮುಂತಾದ ವಿದೇಶಗಳೊಂದಿಗೆ ಸಾಗರೋತ್ತರ ವಾಣಿಜ್ಯ ಸಂಪರ್ಕ ಹೊಂದಿತ್ತು ಮಹಾಬಲಿಪುರಂ, ಕಾವೇರಿ ಪಟ್ಟಣ, ಶಾಲಿಮಾರ್, ಕೊರ್ಕೈ, ಮಲಬಾರ್, ಕ್ವಿಲಾನ್ ಮುಂತಾದವುಗಳು ಪ್ರಮುಖ ವ್ಯಾಪಾರಿ ಪಟ್ಟಣಗಳಾಗಿದ್ದವು. ಚೋಳ ಸಾಮ್ರಾಜ್ಯವು ಪರ್ಷಿಯಾ ಮತ್ತು ಅರೇಬಿಯಾದಿಂದ ಕುದುರೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಚೀನಾ ದೇಶಕ್ಕೆ ಬಟ್ಟೆ, ಮಸಾಲೆ, ಔಷಧ, ರತ್ನ, ಹಸ್ತಿದಂತ, ಕರ್ಪೂರಗಳನ್ನು ರಫ್ತು ಮಾಡುತ್ತಿತ್ತು

ಸಾಮಾಜಿಕ ವ್ಯವಸ್ಥೆ :

ಚೋಳರ ಕಾಲದಲ್ಲಿ ಜಾತಿ ಪದ್ಧತಿ ಅಸ್ಥಿತ್ವದಲ್ಲಿತ್ತು. ಮುಖ್ಯಜಾತಿಗಳಲ್ಲದೆ, ಉಪಜಾತಿಗಳಿದ್ದವು. ರಥಕಾರ, ನೇಕಾರ, ಚೆಟ್ಟಿಯಾರ, ಕಲ್ಮರ ಅನುಲೋಮ, ಪ್ರತಿಲೋಮ ಮತ್ತು ಬಲಗೈ ಹಾಗೂ ಎಡಗೈ ಎಂಬ ಎರಡು ವರ್ಗಗಳಿದ್ದವು. ಎಡಗೈ ವರ್ಗದಲ್ಲಿ 98 ಉಪಜಾತಿಗಳಿದ್ದವೆಂದು ಶಾಸನವು ತಿಳಿಸುತ್ತದೆ. ಈ ಜಾತಿಗಳಲ್ಲಿ ಮೇಲು-ಕೀಳೆಂಬ ಬೇದದಿಂದಾಗಿ ಜಾತಿ ಜಗಳಗಳು ನಡೆಯುತ್ತಿದ್ದವು. ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನಗಳು ಉನ್ನತವಾಗಿದ್ದು, ಸ್ತ್ರೀಯರನ್ನು ಗೌರವದಿಂದ ಕಾಣಲಾಗುತ್ತಿತ್ತು. ಸತಿ ಸಹ ಗಮನ, ದೇವದಾಸಿ, ಬಾಲ್ಯವಿವಾಹ, ಗುಲಾಮಗಿರಿ ಮುಂತಾದವುಗಳು ಸಾಮಾನ್ಯ ವಾಗಿದ್ದವು. ದೇವಾಲಯಗಳು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಾಗಿದ್ದು, ನೃತ್ಯ, ಸಂಗೀತ, ನಾಟಕಗಳು ನಡೆಯುತ್ತಿದ್ದವು. ನೃತ್ಯ ಕಲೆಯಲ್ಲಿ ಪ್ರವೀಣರಾದ ನರ್ತಕಿಯರು ಅಥವಾ ದೇವದಾಸಿಯರು ದೇವಾಲಯಗಳಲ್ಲಿ ಜನತೆಗೆ ಮನರಂಜನೆಯನ್ನು ನೀಡುತ್ತಿದ್ದರು.

ಧಾರ್ಮಿಕ ವ್ಯವಸ್ಥೆ:

ಚೋಳರ ಕಾಲವು ಶೈವ ಮತ್ತು ವೈಷ್ಣವ ಧರ್ಮಗಳ ಉಚ್ಛಾಯ ಕಾಲ ಎಂದೇ ಹೇಳಬಹುದು. ಸಾಮ್ರಾಜ್ಯದ ಅನೇಕ ಭಾಗಗಳಲ್ಲಿ ಶೈವ ಮತ್ತು ವೈಷ್ಣವ ದೇವಾಲಯಗಳು ನಿರ್ಮಾಣಗೊಂಡವು. ಎರಡು ಧರ್ಮಗಳಲ್ಲಿ ಐಕ್ಯಮತವಿತ್ತು. ರಾಜರಾಜ ಚೋಳನು ತಂಜಾವೂರಿನಲ್ಲಿ ಈಶ್ವರ ದೇವಾಲಯವನ್ನು ನಿರ್ಮಿಸಿದನು. ಅವನ ಸಹೋದರಿ ‘ಕುಂಡವಳು’ ಶಿವ ಮತ್ತು ವಿಷ್ಣು ದೇವಾಲಯಗಳನ್ನು ನಿರ್ಮಿಸಿದಳು. ಇವನ ಕಾಲದಲ್ಲಿಯೇ ‘ನಂಬಿಅಂಡಾರ್’ನು ಶೈವ ಸಾಹಿತ್ಯಕ್ಕೆ ಹೊಸ ರೂಪಕೊಟ್ಟನು.

‘ಶಿವನಾಯನ್ನಾರರು ಶೈವ ಧರ್ಮವನ್ನು ಬೋಧನೆ ಮಾಡಿದರು. ಒಂದನೆಯ ರಾಜೇಂದ್ರ ಚೋಳನ ಕಾಲದಲ್ಲಿಯೂ ಶೈವ, ವೈಷ್ಣವ ದೇವಾಲಯಗಳು ಕಟ್ಟಲ್ಪಟ್ಟವು. ಇದೇ ಕಾಲದಲ್ಲಿ ವೈಷ್ಣವ ಸಂತರಾದ ಆಳ್ವಾರರು ವೈಷ್ಣವ ಮತ ಪ್ರಚಾರವನ್ನು ಮಾಡಿದರು. ಸುಂದರಮೂರ್ತಿ, ನಂದನ, ಅಪ್ಪಾರ ಮತ್ತು ಜ್ಞಾನ ಸಂಬಂಧ ಮುಂತಾದ ಶೈವ ಸಂತರು ಶೈವ ಮತ ಪ್ರಚಾರ ಮಾಡಿದರು. ಒಂದನೆಯ ವೀರರಾಜೇಂದ್ರನು ಚಿದಂಬರಂ ದೇವಾಲಯಕ್ಕೆ ಉದಾರವಾದ ದತ್ತಿಗಳನ್ನು ನೀಡಿದನು. ಈ ಕಾಲದ ವೈಶಿಷ್ಟ್ಯವೆಂದರೆ ಕಲೋತ್ತುಂಗ ಚೋಳನ ಕಾಲದಲ್ಲಿ ಶ್ರೀ ರಾಮಾನುಜಾ ಚಾರ್ಯರು ವೈಷ್ಣವ ಧರ್ಮವನ್ನು ಹೆಚ್ಚು ಪ್ರಚಾರಪಡಿಸಿದರು.

ಶಿವಭಕ್ತನಾದ ಕುಲೋತ್ತುಂಗ ಚೋಳನು ಇದನ್ನು ಸಹಿಸದೇ ವೈಷ್ಣವ ವಿರೋಧಿಭಾವನೆ ತಾಳಿದನು. ಇದರಿಂದಾಗಿ ರಾಮಾನುಜಾ ಚಾರ್ಯರು ಚೋಳ ಸಾಮ್ರಾಜ್ಯವನ್ನೇ ತೊರೆಯಬೇಕಾಯಿತು. ಇವರ ಕಾಲದಲ್ಲಿ ಮಠಗಳ ಪ್ರಾಮುಖ್ಯತೆ ಹೆಚ್ಚಾಯಿತು. ಅವು ಶಿಕ್ಷಣ ಕೇಂದ್ರಗಳಾಗಿ, ಆಸ್ಪತ್ರೆಯಾಗಿ, ಬ್ಯಾಂಕಾಗಿ, ರಂಗ ಮಂಟಪವಾಗಿ ಕೆಲಸ ಮಾಡುತ್ತಿದ್ದವು. ಜೈನ ಹಾಗೂ ಬೌದ್ಧ ಧರ್ಮಗಳು ಕಂಚಿ ಮತ್ತು ನಾಗ ಪಟ್ಟಣಗಳಲ್ಲಿ ಮಾತ್ರ ಅಸ್ಥಿತ್ವದಲ್ಲಿದ್ದವು. ಎಲ್ಲಾ ಧರ್ಮಗಳ ಪ್ರಚಾರ ಕಾರ್ಯದಲ್ಲಿ ಸ್ಪರ್ಧೆ ಇತ್ತಾದರೂ ಸಂಘರ್ಷವಿರಲಿಲ್ಲ. ಬಹುಪಾಲು ಚೋಳ ಅರಸರು ಸರ್ವಧರ್ಮ ಸಹಿಷ್ಣುತೆಯನ್ನು ಕಾಪಾಡಿಕೊಂಡಿದ್ದರು.

ಆರೋಗ್ಯ :

ಚೋಳರ ಸಾಹಿತ್ಯ ಮತ್ತು ಕಲೆಗೆ ಮಾತ್ರವಲ್ಲದೇ ಆರೋಗ್ಯ ಕ್ಷೇತ್ರಕ್ಕೂ ಸ್ಮರಣೀಯ ವಾದ ಕೊಡುಗೆ ನೀಡಿದ್ದಾರೆ. ಇತ್ತೀಚಿನ ಸಂಶೋಧನೆ (2010 ಅಗಷ್ಟ-30) ಯಲ್ಲಿ ತಮಿಳನಾಡಿನ ಕಾಂಚೀಪುರಂ ಜಿಲ್ಲೆಯ ತಿರುಮುಕ್ಕೊಡಲ್ ಗ್ರಾಮದ ಪಾಲಾರ್, ವೇಗವತಿ, ಚೆಯ್ಯರ್‌ ನದಿಗಳ ಸಂಗಮ ಸ್ಥಳದಲ್ಲಿ ವೆಂಕಟೇಶ ಪೆರುಮಾಳ್ ದೇವಾಲಯದ ಹತ್ತಿರ 15 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಇತ್ತೆಂದು ತಿಳಿಸುವ ಶಾಸನ ಈ ದೇವಾಲಯದಲ್ಲಿ ದೊರೆತಿದೆ. ಈ ಆಸ್ಪತ್ರೆಯನ್ನು ವೀರಚೋಳನ್ ಎಂದು ಕರೆಯಲಾಗುತ್ತಿತ್ತು.

ಇದರ ಕಾಲ ಕ್ರಿ.ಶ. ಸು. 1100, ಇಲ್ಲಿ ದಂಡರಾಮನ್, ಆಶ್ವತ್ಥಾಮನ್, ಭಟ್ಟನ್ ಎಂಬ ಹೆಸರಿನ ವೈದ್ಯರು, ಶಸ್ತ್ರ ಚಿಕಿತ್ಸಕರು, ದಾದಿಯರು, ಗಿಡಮೂಲಿಕೆ ಅರೆಯುವ ಸೇವಕರು ಮತ್ತು ಕ್ಷೌರಿಕರಿದ್ದರು. 20 ವಿವಿಧ ಗಿಡಮೂಲಿಕಾ ಔಷಧಗಳನ್ನು ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲಾಗಿತ್ತು ಆಸ್ಪತ್ರೆಯ ಸಿಬ್ಬಂದಿಗೆ ವೇತನ ಕೊಡಲಾಗುತ್ತಿತ್ತು ವೇದಶಾಲೆಯ ವಿದ್ಯಾರ್ಥಿಗಳು ಮತ್ತು ದೇವಸ್ಥಾನದ ಸಿಬ್ಬಂದಿಗೆ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಈ ದೇವಾಲಯವು ಪುರಾತನ ಕಾಲದ ಜಯಂಕೊಂಡ ಚೋಳಮಂಡಲಂ ದ ಮಧುರಕಂಠ-ಚತುರ್ವೇದಿ ಮಂಗಲಂ ವಲಯಕ್ಕೆ ಸೇರಿತ್ತು.

ಶಿಕ್ಷಣ: (Education)

ಚೋಳ ಅರಸರು ಶಿಕ್ಷಣಕ್ಕೆ ಹೆಚ್ಚಿನ ಪ್ರೊತ್ಸಾಹ ನೀಡಿದ್ದರು. ಶೈವ, ವೈಷ್ಣವ ದೇವಾಲಯಗಳು, ಮಠಗಳು, ಶಿಕ್ಷಣ ಕೇಂದ್ರಗಳಾಗಿದ್ದವು. ಶಾಸ್ತ್ರಾಭ್ಯಾಸಗಳನ್ನು ಮಾಡಲು ಉಚ್ಚವಿದ್ಯಾಪೀಠಗಳಿದ್ದವು ‘ಎನ್ನಾಯಿರಾಮ’ ಎಂಬಲ್ಲಿ ಶ್ರೇಷ್ಠ ವೈಷ್ಣವ ವಿದ್ಯಾಕೇಂದ್ರವಿತ್ತು ಇಲ್ಲಿ ಮಹಾಕಾವ್ಯಗಳು, ಪುರಾಣ, ಮೀಮಾಂಸೆ, ವ್ಯಾಕರಣ, ವೇದ, ವೇದಾಂತಗಳನ್ನು ಬೋಧಿಸಲಾಗುತ್ತಿತ್ತು. ಅಲ್ಲಿ 14 ಪ್ರಾಧ್ಯಾಪಕರು, 340 ವಿದ್ಯಾರ್ಥಿಗಳಿದ್ದರು. ಪಾಂಡಿಚೇರಿಯ ‘ತ್ರಿಭುವನಿ’ಯಲ್ಲಿ ಉಚ್ಚವಿದ್ಯಾಪೀಠ ವಿತ್ತೆಂದು, ಮೇಲೆ ತಿಳಿಸಿದ ಎಲ್ಲಾ ವಿಷಯಗಳನ್ನು, ಮತ್ತು ‘ಮನುಧ ರ್ಮಶಾಸ್ತ್ರ’ಗಳನ್ನು ಕಲಿಸಲಾಗುತ್ತಿತ್ತು ಅಲ್ಲಿ 12 ಪ್ರಾಧ್ಯಾಪಕರು, 260 ವಿದ್ಯಾರ್ಥಿಗಳಿದ್ದರೆಂದು ತಿಳಯುತ್ತದೆ. ‘ತಿರುಮುಕ್ಕುಡಲ್ ಎಂಬಲ್ಲಿ ಉಚ್ಚ ವಿದ್ಯಾಪೀಠವಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿ, ಆಸ್ಪತ್ರೆ, ದೀಪ ಮುಂತಾದ ಅನುಕೂಲತೆಗಳಿದ್ದವು. ‘ತಿರುವಡುತುರೆ’ ಎಂಬಲ್ಲಿ ವೈದ್ಯಕೀಯ ಶಾಲೆ ಇದ್ದು, ಅಲ್ಲಿ ಚರಕನ ‘ಸಂಹಿತಾ’, ಮತ್ತು ವಾಗೃಟನ ‘ಅಷ್ಟಾಂಗ ಹೃದಯ ಸಂಹಿತಾ’ಗಳನ್ನು ಕಲಿಸಲಾಗುತ್ತಿತ್ತು.

ಸಾಹಿತ್ಯ (Literature):

ಚೋಳ ಅರಸರು ಸಾಹಿತ್ಯ ಪೋಷಕರಾಗಿದ್ದರಿಂದ ತಮಿಳು ಸಾಹಿತ್ಯವು ವಿಪುಲವಾಗಿ ಬೆಳೆಯಿತು. ಶೈವ ಮತ್ತು ವೈಷ್ಣವ ಧರ್ಮಗಳ ಪ್ರಸಾರದಿಂದಾಗಿ ಧಾರ್ಮಿಕ ಸಾಹಿತ್ಯವೇ ಪ್ರಧಾನವಾಗಿ ಬೆಳೆಯಿತು. ರಾಮಾಯಣ ಮತ್ತು ಮಹಾಭಾರತಗಳು  ತಮಿಳು ಭಾಷೆಯಲ್ಲಿ ಭಾಷಾಂತರಿಸಲ್ಪಟ್ಟವು. ಜೈನ ಕವಿ ತಿರುತಕ್ಕದೇವನು ರಚಿಸಿದ ಶಿವಕಾಸಿಂದ ಮಣಿ, ಕಲ್ಲಾಂಡರನು ರಚಿಸಿದ ‘ಕಲ್ಲಾಡಂ, ಅಮಿತಸಗರನು ರಚಿಸಿದ ಯಪ್ಪರುಂಗಲಂ, ನಂಬಿ ಅಂದರ್‌ನಂಬಿಯ ಶೈವನೀತಿ, ಬುದ್ದಮಿತ್ರನು ರಚಿಸಿದ ವೀರ ಸೋಲಿಯಂ, ಜಯಗೊಂಡರ್‌ನು ರಚಿಸಿದ ಕಲಿಂಗತುಪ್ಪರಸಿ, ಕವಿಚಕ್ರವರ್ತಿಯಾದ ಕಂಭನು ರಚಿಸಿದ ‘ಕಂಭರಾಮಾಯಣ, ಸೆಕ್ಕಿಲಾರನು ರಚಿಸಿದ ಪೆರಿಯ ಪುರಾಣಂ, ತುಳಿಸೀದಾಸರು ಹಿಂದಿಯಲ್ಲಿ ರಚಿಸಿದ ರಾಮಾಯಣ, ಪವನಂದಿಯು ರಚಿಸಿದ ನನ್ನುಲ್, ವೆಂಕಟ ಮಾಧವನು ಸಂಸ್ಕೃತದಲ್ಲಿ ಬರೆದ ಋಗರ್ಥ ದೀಪಿಕಾ, ಕೇಶವಸ್ವಾಮಿನ್ ರಚಿಸಿದ ನಾನಾರ್ಥಾರ್ವವ ಮುಂತಾದವುಗಳು ಪ್ರಮುಖ ಸಾಹಿತ್ತಿಕ ಕೃತಿಗಳಾಗಿವೆ. ಹೀಗೆ ಚೋಳರ ಕಾಲದಲ್ಲಿ ಹಿಂದಿ, ಸಂಸ್ಕೃತ ಸಾಹಿತ್ಯವಲ್ಲದೇ, ತಮಿಳು ಸಾಹಿತ್ಯದ ಭಂಡಾರವೇ ನಿರ್ಮಾಣ ವಾಯಿತು..

ಕಲೆ ಮತ್ತು ವಾಸ್ತು ಶಿಲ್ಪ (Art and Architecture):

ಚೋಳ ಅರಸರು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ನೀಡಿದ್ದರಿಂದ ಕಲೆ ಮತ್ತು ವಾಸ್ತುಶಿಲ್ಪವು ಗಮನಾರ್ಹವಾದ ಪ್ರಗತಿಯನ್ನು ಹೊಂದಿತು. ಚೋಳರು ಪಲ್ಲವರ ಆರಂಭಿಸಿದ ದ್ರಾವಿಡ ಶಿಲ್ಪ ಕಲಾ ಶೈಲಿಯನ್ನೇ ಮುಂದುವರೆಸಿದರಾದರೂ, ಅದರಲ್ಲಿ ಹಲುವು ಮಾರ್ಪಾಡುಗಳನ್ನೂ ಮಾಡಿಕೊಂಡು ರೂಪಗೊಂಡಿದ್ದರಿಂದ ಅದು ‘ಚೋಳರ ಕಲೆ’ಯಂದೇ ಹೆಸರಾಗಿದೆ. ಈ ಕಾರಣದಿಂದಾಗಿ ದ್ರಾವಿಡ ಶೈಲಿಯ ಶಿಲ್ಪಕಲೆಯು ಚೋಳರಿಂದ ಪರಿಪಕ್ವತೆಯನ್ನು ಪಡೆಯಿತು. ಚೋಳ ಅರಸರು ಆರಂಭದಲ್ಲಿ ಸುಂದರೇಶ್ವರ, ವಿಜಯಾಲಯ, ಚೋಳೇಶ್ವರ ಮತ್ತು ಕೊರಂಗನಾಥ ಮುಂತಾದ ಸಣ್ಣಪುಟ್ಟ ದೇವಾಲಯಗಳನ್ನು ನಿರ್ಮಿಸಿದರು.

ನಂತರದ ಕುಂಭಕೋಣಂದ ನಾಗೇಶ್ವರ ದೇವಾಲಯ, ಶ್ರೀನಿವಾಸ ನಲ್ಲೂರಿನ ಶ್ರೀರಂಗನಾಥ ದೇವಾಲಯಗಳು ಅವರ ಶೈಲಿಯ ಉತ್ಕೃಷ್ಟತೆಯನ್ನು ಪ್ರದರ್ಶಿಸುತ್ತವೆ.

ಚೋಳರ ವಾಸ್ತುಶಿಲ್ಪ ಪರಂಪರೆಯನ್ನು ಅಭಿವೃದ್ಧಿ ಪಡಿಸಿದವರು ಒಂದನೆಯ ರಾಜರಾಜ. ಇವನ ಕಾಲದಲ್ಲಿ ಕಟ್ಟಲ್ಪಟ್ಟ ತಂಜಾವೂರಿನ ರಾಜರಾಜೇಶ್ವರ (ಬೃಹದೇಶ್ವರ) ದೇವಾಲಯವು ಪಲ್ಲವ ಶೈಲಿಯಲ್ಲಿದೆ. “ಭಾರತದ ದೇವಾಲಯಗಳಲ್ಲೇ ಅತ್ಯಂತ ವಿಸ್ತಾರವಾದ ಹಾಗೂ ಅತ್ಯಂತ ಎತ್ತರವಾದ ಈ ದೇವಾಲಯ ದಕ್ಷಿಣ ಭಾರತದ ಕಲಾ ಬೆಳವಣಿಗೆಯ ಮೈಲುಗಲ್ಲಾಗಿದ್ದು, ದೇವಾಲಯ ನಿರ್ಮಾಣದ ಇತಿಹಾಸದಲ್ಲಿ ಕಲಾ ಮತ್ತು ವಾಸ್ತು ಶಿಲ್ಪದ ಪರಮಾವಧಿ ಸಾಧನೆಯ ಪ್ರತೀಕವಾಗಿದೆ’ ಎಂದು ಪರ್ಸಿಬ್ರಾನ್‌ರವರು ಅಭಿಪ್ರಾಯ ಪಟ್ಟಿದ್ದಾರೆ.

ಕ್ರಿ. ಶ. 1009ರಲ್ಲಿ ನಿರ್ಮಾಣವಾದ ಈ ದೇವಾಲಯವು 180 ಅಡಿ ಉದ್ದ 80 ಅಡಿ ಅಗಲವಾಗಿದ್ದು, 190 ಅಡಿ ಎತ್ತರವಾಗಿದ್ದು, ಹದಿಮೂರು ಅಂತಸ್ತುಗಳಿಂದ ಕೂಡಿದ ವಿಮಾನವನ್ನು ಹೊಂದಿದೆ. ಇದು ಭಾರತದಲ್ಲಿಯೇ ಅತ್ಯಂತ ಎತ್ತರವಾದ ದೇವಾಲಯವಾಗಿದೆ. ದೇವಾಲಯವು ಅರ್ಧಮಂಟಪ, ಮಹಾಮಂಟಪ, ನಂದಿಮಂಟಪಗಳನ್ನು ಹೊಂದಿದೆ. ದೇವಾಲಯದ ಪ್ರಕಾರದಲ್ಲಿ 35 ಪುಟ್ಟ ಗುಡಿಗಳಿವೆ. ಪ್ರವೇಶ ದ್ವಾರವು 99 ಅಡಿ ಎತ್ತರವಾಗಿದೆ. “ರಾಜರಾಜನ ಮಹತ್ಸಾಧನೆಯಾದ ಈ ದೇವಾಲಯವನ್ನು ಗಾತ್ರದಲ್ಲಾಗಲಿ, ವಿನ್ಯಾಸದ ಲ್ಲಾಗಲಿ, ಶಿಲ್ಪದಲ್ಲಾಗಲಿ, ಸೌದರ್ಯದಲ್ಲಾಗಲಿ ಮೀರಿಸುವ ಮತ್ತೊಂದು ಚೋಳ ದೇವಾಲಯ ನಿರ್ಮಾಣವಾಗಿಲ್ಲ.”

ರಾಜರಾಜನ ಮಗ ರಾಜೇಂದ್ರನು ಕ್ರಿ.ಶ. 1030ರಲ್ಲಿ ಗಂಗೈಕೊಂಡ ಚೋಳಪುರದಲ್ಲಿ ಕಟ್ಟಿಸಿದ ಶಿವಾಲಯವು ಚೋಳ ಶೈಲಿಯ ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯದ ಸಭಾಮಂದಿರವು 175 ಅಡಿ ಉದ್ದ 75 ಅಡಿ ಅಗಲವಾಗಿದ್ದು, ವಿಮಾನವು 8 ಅಂತಸ್ತುಗಳಿಂದ ಕೂಡಿದ್ದು, 150 ಅಡಿ ಎತ್ತರವಾಗಿದೆ. ಇದರ ಸಭಾಮಂದಿರದಲ್ಲಿ 150 ಸುಂದರ ಕೆತ್ತನೆಯ ಕಂಬಗಳಿವೆ. ಈ ಎರಡೂ ದೇವಾಲಯಗಳನ್ನು ಕುರಿತು ಪರ್ಸಿಬ್ರಾನ್ “ಇವೆರಡೂ ಚೋಳರ ಮೇರು ಕೃತಿಗಳು, ತಂಜಾವೂರಿನ ಬೃಹದೇಶ್ವರ ದೇವಾಲಯ ಶಕ್ತಿಯ ಸಂಕೇತವಾದರೆ, ಗಂಗೈಕೊಂಡ ಚೋಳಪುರಂನ ಶಿವ ದೇವಾಲಯ ಸೌಂದರ್ಯಸೊಬಗಿನ ನಿಧಿಯಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತಂಜಾವೂರಿನ ಸುಬ್ರಮಣೇಶ್ವರ, ದಾರಾಸುರಂದಲ್ಲಿಯ ಐರಾವತೇಶ್ವರ, ತ್ರಿಭುವನಂದಲ್ಲಿನ ತ್ರಿಭೂವನೇಶ್ವರ, ಕೋಲಾರದ ಕೋಲಾರಮ್ಮನ ದೇವಾಲಯ, ಹೊನ್ನಹಳ್ಳಿಯ ರಾಮೇಶ್ವರ, ಶ್ರೀನಿವಾಸನಲ್ಲೂರಿನ ಕೊರಂಗನಾಥ, ನೂಣುವಿನಕೆರೆಯ ನೊಣಬೇಶ್ವರ ದೇವಾಲಯ ಇವು ಚೋಳರ ಇತರೇ ಪ್ರಮುಖ ದೇವಾಲಯಗಳಾಗಿವೆ.

ಚೋಳರ ಕಾಲದಲ್ಲಿ ಮೂರ್ತಿ ಶಿಲ್ಪ ಮತ್ತು ಲೋಹದ ಕಾಲಾಕೃತಿಗಳ ರಚನೆ ಗಮನಾರ್ಹ ಪ್ರಗತಿ ಹೊಂದಿದ್ದು ‘ನಟರಾಜನ’ ಆಕರ್ಷಕ ಪ್ರತಿಮೆ ಜಗತ್ ಪ್ರಸಿದ್ಧಯಾಗಿದೆ. ಶಿವ, ಬ್ರಹ್ಮ ವಿಷ್ಣು ಲಕ್ಷ್ಮಿ ಶ್ರೀದೇವಿ, ಭೂದೇವಿ, ಕೃಷ್ಣ ರಾಜ, ಸೀತೆ, ಕಾಳಿಂಗಮರ್ಧನ ಮೊದಲಾದ ಕೃತಿಗಳು ಅಮೋಘವಾಗಿದ್ದು, ಜೀವಕಳೆಯಿಂದ ಕೂಡಿವೆ.

Read More….

KARTET NOTES-2025: ಪಲ್ಲವರ ಕೊಡುಗೆಗಳು

ಶಾಸನಗಳ ಮಹತ್ವ, ಪ್ರಮುಖ ಶಾಸನಗಳು

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment