Contribution of Pollava: ಪಲ್ಲವರ ಕೊಡುಗೆಗಳು ನೋಟ್ಸ್-01

Contribution of Pollava: ಪಲ್ಲವರ ಕೊಡುಗೆಗಳು ನೋಟ್ಸ್-01

Contribution of Pollava: ಪಲ್ಲವರ ಕೊಡುಗೆಗಳು

ದಕ್ಷಿಣ ಭಾರತದಲ್ಲಿ ಆರು ಶತಮಾನಗಳಿಗಿಂತ ದೀರ್ಘಕಾಲ ಆಳ್ವಿಕೆಮಾಡಿದ ಪಲ್ಲವರು ಭಾರತೀಯ ಸಂಸ್ಕೃತಿಗೆ ನೀಡಿರುವ ಕೊಡುಗೆ ಸ್ಮರವಾರ್ಹವಾಗಿದೆ. ತಮ್ಮ ಸಮಕಾಲಿನ ರಾಜ ಮನೆತನಗಳಾದ ಚೋಳ, ಪಾಂಡ್ಯ ಮತ್ತು ರಾಷ್ಟ್ರಕೂಟರಿಗಿಂತಲೂ ಉತ್ತಮವಾದ ಆಡಳಿತ ಪದ್ಧತಿಯನ್ನು ಹೊಂದಿದ್ದರು. ಪಲ್ಲವ ಸಾಮ್ರಾಜ್ಯದಲ್ಲಿ ಸುಸಂಘಟಿತವಾದ ಆಡಳಿತ ಪದ್ಧತಿ ಜಾರಿಯಲ್ಲಿತ್ತೆಂದು ಹಿರೇಹಡಗಲಿ ಶಾಸನ ಉಲ್ಲೇಖಿಸುತ್ತದೆ. ಇವರ ಆಡಳಿತ ಪದ್ಧತಿ ಶಾತವಾಹನರ ಆಡಳಿತ ಪದ್ಧತಿಯನ್ನೇ ಬಹುಮಟ್ಟಿಗೆ ಹೋಲುತ್ತಿತ್ತು ಆದರೆ ಕಾಲಕ್ರಮೇಣ ಕೆಲವೊಂದು ಮಾರ್ಪಾಡುಗಳನ್ನು ಪಲ್ಲವರು ತಮ್ಮ ಆಡಳಿತದಲ್ಲಿ ಜಾರಿಗೆ ತಂದರು. ಆಡಳಿತದಲ್ಲಿ ಮಾತ್ರವಲ್ಲದೇ ಧರ್ಮ, ಕಲೆ, ಸಾಹಿತ್ಯ, ವಿದ್ಯೆ ಈ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ.

ಆಡಳಿತ: (Administration)

ಪಲ್ಲವರ ಆಡಳಿತವು ದಕ್ಷವು, ಸುಸಂಘಟಿತವು ಆಗಿತ್ತು ದೊರೆಯು ಆಡಳಿತ ವ್ಯವಸ್ಥೆಯ ಮುಖ್ಯಸ್ಥನಾಗಿದ್ದು, ಅರಸೋತ್ತಿಗೆ ವಂಶಪಾರಂಪರ್ಯವಾಗಿತ್ತು. ಸಾಮಾನ್ಯವಾಗಿ ಹಿರಿಯ ಮಗನನ್ನು ಯುವರಾಜನನ್ನಾಗಿ ನೇಮಿಸಲಾಗುತ್ತಿತ್ತು.

ಅವನನ್ನು ‘ಯುವಮಹಾರಾಜ’ ಎಂದು ಕರೆಯಲಾಗುತ್ತಿತ್ತು. ಅರಸನಿಗೆ ರಾಜ್ಯಾಡಳಿತದಲ್ಲಿ ನೆರವಾಗಲು ಮಂತ್ರಿ ಪರಿಷದ್ ಅಥವಾ ‘ರಹಸ್ಯಾದಿಕೃತ ರೆಂಬ ಮಂತ್ರಿಗಳ ಸಮೂಹವಿತ್ತು. ಅದು ಮಂತ್ರಿಗಳು, ಸೇನಾನಿಗಳು, ಪುರೋಹಿತರು ಹಾಗೂ ಬುದ್ದಿಜೀವಿಗಳನ್ನು ಒಳಗೊಂಡಿತ್ತು.

ರಾಜನ ಆಪ್ತಕಾರ್ಯದರ್ಶಿಯುನಿರೂಪಗಳನ್ನು ಮತ್ತು ಶಾಸನಗಳನ್ನು ಬರೆಯುತ್ತಿದ್ದನು. ಸೈನ್ಯದ ನಾಯಕತ್ವ, ಯುದ್ಧ ಒಪ್ಪಂದ, ನ್ಯಾಯ ವಿತರಣೆ, ಅಧಿಕಾರಿಗಳ ನೇಮಕ, ಸಮಾಜದ ಶಾಂತಿ ಮುಂತಾದವುಗಳು ಅರಸನ ಜವಾಬ್ದಾರಿಗಳಾಗಿದ್ದವು. ಪಲ್ಲವ ಅರಸರು ವ್ಯವಸಾಯಕ್ಕಾಗಿ ಕೆರೆಗಳನ್ನು, ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು, ಧಾರ್ಮಿಕ ನೆಮ್ಮದಿಗಾಗಿ ದೇವಾಲಯಗಳನ್ನು ಕಟ್ಟಿಸುತ್ತಿದ್ದರು.

ಪಲ್ಲವ ರಾಜರು ಕಟ್ಟಿಸಿದ ಕುಮಾರನ್ ಪರಮೇಶ್ವರ ತಟಾಕ, ಮಹೇಂದ್ರ ತಟಾಕ, ಮೇಘ ತಟಾಕ ಪ್ರಸಿದ್ಧವಾಗಿವೆ. ಪಲ್ಲವ ಅರಸರು ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಮಂಡಲ, ಒಳನಾಡು, ಕೊಟ್ಟಂ, ನಾಡು ಮತ್ತು ಗ್ರಾಮಗಳಾಗಿ ವಿಭಾಗಿಸಿದ್ದರು.

ಗ್ರಾಮವು ಆಡಳಿತದ ಅತ್ಯಂತ ಚಿಕ್ಕ ಘಟಕವಾಗಿತ್ತು. ಗ್ರಾಮದಲ್ಲಿ ಗ್ರಾಮಸಭೆಯನ್ನು ರಚಿಸಲಾಗಿದ್ದು ಗ್ರಾಮಸಭೆಯ ಸದಸ್ಯರನ್ನು ‘ಪೆರುಮಕ್ಕಳ್’ ಎಂಬ ಹೆಸರಿನಿಂದ ಕರೆಯ ಲಾಗುತ್ತಿತ್ತು. ಈ ಎಲ್ಲ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು, ರಾಜಕುಮಾರ, ಸೇನಾಪತಿ, ಅಮಾತ್ಯ ರಾಷ್ಟ್ರಕ, ದೇಶಾಧಿಕೃತ, ಗ್ರಾಮಭೋಜಕ, ಗೌಮೊಳಿಕ ಎಂಬ ಅಧಿಕಾರಿವರ್ಗವಿತ್ತು. ಮುಖ್ಯಾಧಿಕಾರಿಯನ್ನು ‘ರಟಿಕ’ ನೆಂದೂ, ಗ್ರಾಮದ ಮುಖ್ಯಸ್ಥನನ್ನು ‘ಗ್ರಾಮ ಭೋಜಕ ನೆಂದೂ, ಮಂತ್ರಿಗೆ ‘ಅಮೈಚ್ಚರ್’ ಎಂದೂ, ಅರಣ್ಯ ರಕ್ಷಕನಿಗೆ ‘ಭೂಮಿಕ’ನೆಂದೂ, ದೂತನಿಗೆ ‘ದೂತಿಕ’ನೆಂದೂ, ಗೂಢಚಾರಿಗೆ ‘ಸಂಚಾರ ರಂಜಕ’ ನೆಂದೂ, ಸೈನಿಕನನ್ನು ‘ಬಡಮನುಷ್ಯ’ ಎಂದು ಕರೆಯುತ್ತಿದ್ದರು.

ಪಲ್ಲವ ದೊರೆಗಳು ಸುಸಜ್ಜಿತವಾದ ಮತ್ತು ಸಂಪ್ರದಾಯಬದ್ಧ ಚದುರಂಗ ಬಲವನ್ನು ಹೊಂದಿದ್ದರು. ಯುದ್ಧ ಕಾಲದಲ್ಲಿ ಭರ್ಚಿ, ಕತ್ತಿ ಬಿಲ್ಲುಬಾಣ, ಎದೆಕವಚ, ಶಿರಸ್ತ್ರಾಣಗಳನ್ನು ಉಪಯೋಗಿಸುತ್ತಿದ್ದರು. ಇವರು ಬಲಾಡ್ಯ ಗಜದಳವನ್ನು ಮತ್ತು ನೌಕಾಬಲವನ್ನು ಹೊಂದಿದ್ದರು. ಇವರ ಕಂದಾಯ ಪದ್ಧತಿಯು ವಿಸ್ತಾರವಾಗಿತ್ತು ‘ಅಷ್ಟದಶಪರಿಹಾರ’ ಗಳೆಂಬ ಹದಿನೆಂಟು ವಿಧವಾದ ತೆರಿಗೆಗಳನ್ನು ಪ್ರಜೆಗಳ ಮೇಲೆ ವಿಧಿಸಲಾಗಿತ್ತು. ಭೂಮಾಪನ, ನೀರಾವರಿ, ಕೃಷಿ, ಕೈಗಾರಿಕೆ, ಅಬಕಾರಿ, ಸಾಕುಪ್ರಾಣಿ, ವ್ಯಾಪಾರ ಮುಂತಾದವುಗಳ ಮೇಲೆ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ತೆರಿಗೆಯನ್ನು ವಿಧಿಸಿ, ವ್ಯವಸ್ಥಿತವಾಗಿ ಸಂಗ್ರಹಿಸುವುದು ಅಮಾತ್ಯರ ಮುಖ್ಯ ಕರ್ತವ್ಯಗಳಾಗಿದ್ದವು.

ಧರ್ಮ: (Religion)

ಪಲ್ಲವರ ಕಾಲದಲ್ಲಿ ಬೌದ್ಧ ಜೈನ, ಶೈವ, ವೈಷ್ಣವ ಧರ್ಮಗಳು ಪ್ರಗತಿ ಹೊಂದಿದ್ದವು. ಶೈವ ಮತ್ತು ವೈಷ್ಣವ ಧರ್ಮಗಳು ಉಚ್ಛಾಯ ಸ್ಥಿತಿಯಲ್ಲಿದ್ದವು. ಪಲ್ಲವ ದೊರೆಗಳು ಈ ಎಲ್ಲ ಧರ್ಮಗಳ ಪೋಷಕರಾಗಿದ್ದರಿಂದ ಅವರನ್ನು ‘ಧರ್ಮಮಹಾರಾಜಾಧಿರಾಜ ಮತ್ತು ‘ಧರ್ಮಮಹಾರಾಜಾ’ ಎಂಬ ಬಿರುದುಗಳಿಂದ ಕರೆಯಲಾಗಿದೆ. ಕ್ರಿ. ಶ. 6ನೆ ಶತಮಾನದ ವೇಳೆಗೆ ಶೈವ ಮತ್ತು ವೈಷ್ಣವ ಪಂತಗಳಿಗೆ ಪಲ್ಲವ ಅರಸರು ವಿಶೇಷ ಪ್ರೋತ್ಸಾಹ ನೀಡಿದ್ದರಿಂದ ಜೈನ ಮತ್ತು ಬೌದ್ಧ ಧರ್ಮಗಳು ರಾಜಾಶ್ರಯ ಕಳೆದುಕೊಂಡು ಕ್ಷೀಣಿಸಿದವು.

ಒಂದನೆ ನರಸಿಂಹವರ್ಮನ ಕಾಲಕ್ಕೆ ಕಂಚಿಗೆ ಭೆಟ್ಟಿನೀಡಿದ್ದ ಚೀನಿಯಾತ್ರಿಕ ಹೂಯನ್‌ ತ್ಸಾಂಗ್‌ನು ಕಂಚಿಯಲ್ಲಿ ನೂರಕ್ಕೂ ಅಧಿಕ ಬೌದ್ಧ ವಿಹಾರಗಳು, 80 ಕ್ಕೂ ಹೆಚ್ಚು ಜಿನಾಲಯಗಳು, ದೇವಾಲಯಗಳಿದ್ದವೆಂದು, ಬೌದ್ಧ ವಿಹಾರಗಳಲ್ಲಿ 10,000 ಬೌದ್ಧ ಬಿಕ್ಷುಗಳು ವಾಸವಾಗಿದ್ದ ರೆಂದು ತಿಳಿಸಿದ್ದಾನೆ. ಸಲುಗೆ ಒಂದನೆ ಸಂಹೇಂದ್ರವನು ಮಾರರು ಬಂದರ ಜಾರ್ತ ಇವರು ಮೊದಲು ಜೈನರಾಗಿದ್ದು, ಶೈವ ಸಂತ ಅಪ್ಪಾರ್‌ನ ಪ್ರಭಾವದಿಂದಾಗಿ ಶೈವ ಮತವಾಗಿದೆ 391 ಗಳಾದರು. ಪಲ್ಲವರ ಕಾಲದಲ್ಲಿ ಮಾಣಿಕ್ಯವಾಚಕರ್, ಸಂಬಂದರ್, ಅನ್ಸಾರ್ ಮುಂತಾದ ಜನ ಶೈವ ನಾಯನ್ನಾರ್‌ರು ಶೈವ ಮತವನ್ನು ಪ್ರಚಾರ ಮಾಡಿದರು.

ತಿರುಮಂಗೈ ಆಳ್ವಾ‌ರ್, ತಿರುಮಲಶೈ ಆಳ್ವಾರ್, ಅಂಡಾಳ್, ಪೂತಮ್ ಮುಂತಾದ 12 ಜನ ಅಳ್ವಾರರು ವೈಷ್ಣವ ಧರ್ಮವನ್ನು ಪ್ರಸಾರ ಮಾಡಿದರು. ಪಲ್ಲವರ ಕೊನೆಯ ದೊರೆಗಳು ಅಪಾರ ಸಂಖ್ಯೆಯಲ್ಲಿ ಶೈವ, ವೈಷ್ಣವ ದೇವಾಲಯಗಳನ್ನು ನಿರ್ಮಿಸಿದರು. ಈ ದೇವಾಲಯಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಸದಸ್ಯ ಸಮಿತಿ ಇತ್ತು ಅದನ್ನು ‘ಅಮೃತ ಗಣ’ ಎಂದು ಕರೆಯಲಾಗುತ್ತಿತ್ತು”

ಸಾಹಿತ್ಯ: (Literature)

ಪಲ್ಲವ ಯುಗವು ವಿಪುಲ ಸಾಹಿತ್ಯ ಚಟುವಟಿಕೆಗಳ ಕಾಲವಾಗಿತ್ತು. ಪಲ್ಲವ ಅರಸರು ಸಾಹಿತ್ಯ ಪೋಷಕರಾಗಿದ್ದು, ತಮಿಳು ಮತ್ತು ಸಂಸ್ಕೃತ ಭಾಷೆಗಳನ್ನು ಅಭಿವೃದ್ಧಿಪಡಿಸಿದರು. ಇವರ ರಾಜಧಾನಿ ಕಂಚಿ ಸಂಸ್ಕೃತ ವಿದ್ಯೆಯ ಮಹಾಜ್ಞಾನ ಕೇಂದ್ರವಾಗಿತ್ತು. ಇಲ್ಲಿಗೆ ಕದಂಬ ವಂಶದ ಸ್ಥಾಪಕ ಮಯೂರವರ್ಮ ಉನ್ನತ ವೇದಾಧ್ಯಯನಕ್ಕಾಗಿ ಬಂದಿದ್ದನು. ನಲಂದ ವಿಶ್ವವಿದ್ಯಾನಿಲ ಯದ ಕುಲಪತಿಯಾಗಿದ್ದ ಧರ್ಮಪಾಲನು ಕಂಚಿಯವನೆಂದು ಹೂಯನ್‌ ತ್ಸಾಂಗ್ ತಿಳಿಸುತ್ತಾನೆ.

‘ಕಿರಾತಾರ್ಜುನಿಯ’ ವನ್ನು ಬರೆದ ಭಾರವಿಯು ಪಲ್ಲವ ದೊರೆ ಸಿಂಹವಿಷ್ಣುವಿನ ಆಸ್ಥಾನದಲ್ಲಿ ಕೆಲಕಾಲ ಇದ್ದನೆಂದು ತಿಳಿಯಲಾಗಿದೆ. ಪಲ್ಲವ ದೊರೆ ಒಂದನೆ ಮಹೇಂದ್ರವರ್ಮನು ಸ್ವತಃ ಸಾಹಿತಿಯಾಗಿದ್ದು, ‘ಮತ್ತು ವಿಲಾಸ ಪ್ರಹಸನ’ ಮತ್ತು “ಭಗವಧ್ವಜಕೀಯಂ” ಎಂಬ ಸಂಸ್ಕೃತ ಗ್ರಂಥಗಳನ್ನು ರಚಿಸಿದನು. ಸಂಸ್ಕೃತದ ಪ್ರಸಿದ್ದ ಕವಿ ದಂಡಿನ್ ‘ಆವಂತೀಸುಂದರಿ ಕಥಾ’, ‘ದಶಕುಮಾರ ಚರಿತೆ’ ಮತ್ತು ಕಾವ್ಯದರ್ಶ’ ಎಂಬ ಗ್ರಂಥಗಳನ್ನು ರಚಿಸಿದನು.

ಇವನು 2ನೇ ನರಸಿಂಹವರ್ಮನ ಆಸ್ಥಾನದಲ್ಲಿದ್ದನು. ಕಂಚಿವಿಶ್ವವಿದ್ಯಾಲಯದಲ್ಲಿ ಅಧ್ಯಯನಮಾಡಿದ ದಿಜ್ಜಾಗ ಎಂಬ ಬೌದ್ಧ ವಿದ್ವಾಂಸನು ‘ನ್ಯಾಯ ಪ್ರವೇಶ’ ಎಂಬ ಕೃತಿ ರಚಿಸಿದನು. ಇವನಿಗೆ ‘ತರ್ಕಪುಂಗವ’ ಎಂಬ ಬಿರುದಿತ್ತು.

ಕೇರಳದ ಸಂತಸಾಹಿತಿ ಆಳ್ವಾರ್ ‘ಮುಕುಂದ ಮಾಲಾ ಸೂತ್ರ’ ಎಂಬ ಕೃತಿಯನ್ನು ರಚಿಸಿದನು. ತಿರುಮಲಕ್ಕೆ ಎಂಬ ವಿದ್ವಾಂಸ ‘ನಾನ್‌ಮುಗನ್ ತಿರುವಂಡಾಡಿ’ ಮತ್ತು ‘ತಿರುಚ್ಚಂದ ವಿರುತ್ತಮ್’ ಎಂಬ ಗ್ರಂಥಗಳನ್ನು ರಚಿಸಿದನು. ಮಾಮಲರ್ ಎಂಬ ಕವಿ “ತಿರುಮಂದಿರಮ್” ಎಂಬ ಕೃತಿ ರಚಿಸಿದನು.

ತೇವಾರಂ, ನಾಲಾಯರ ಪ್ರಬಂಧಂ, ‘ನಂದಿಕೆಳಪ್ಪಾಕರ’ ಎಂಬ ಕೃತಿಗಳು ಪಲ್ಲವರ ಕಾಲದಲ್ಲಿ ರಚನೆ ಯಾದವು. ಪ್ರಸಿದ್ಧಶೈವ ಸಂತರಾದ ತಿರುಜ್ಞಾನ ಸಂಬಂಧರ್, ಅಪ್ಪಾರ್, ಸುಂದರ ಮೂರ್ತಿ ಮಾಣೆಕ್ಯವಾಚಕರ್, ಪಟ್ಟಿನೆತ್ತಾರ್, ಕಾರೈಕಲ್ ಅಮ್ಮಾರ್ ಮುಂತಾದವರು ತಮಿಳು ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಮಾಣಿಕ್ಯವಾಚಕ‌ನನು’ ತಿರುವಾಚಗರ’ ಎಂಬ ಪ್ರಸಿದ್ದ ಕೃತಿ ರಚಿಸಿದನು. ಇವರ ಕಾಲದಲ್ಲಿ ರಾಮಾಯಣ ಮತ್ತು ಮಹಾಭಾರತಗಳು ತುಂಬಾ ಜನಪ್ರೀಯವಾಗಿದ್ದು, ತಮಿಳು ಭಾಷೆಗೆ ಭಾಷಾಂತರಗೊಂಡವು.

ಕಲೆ ಮತ್ತು ವಾಸ್ತು ಶಿಲ್ಪ : (Art and Architecture)

ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಪಲ್ಲವರ ಸಾಧನೆ ಅಸದೃಶವಾದುದಾಗಿದೆ. ಪಲ್ಲವರ ಕಾಲದಲ್ಲಿ ವಿಶಿಷ್ಟವಾದ ಕಲಾ ಶೈಲಿಯು ದಕ್ಷಿಣ ಭಾರತದಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಶೈಲಿಯನ್ನು ದ್ರಾವಿಡ ಶೈಲಿಯೆಂದು ಕರೆಯಲಾಗಿದೆ. ಪಲ್ಲವರ ಕಲೆ ಮತ್ತು ವಾಸ್ತಶಿಲ್ಪವನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗಿದೆ.

1. ಮಹೇಂದ್ರವರ್ಮ ಶೈಲಿ : ಕ್ರಿ. ಶ. 600 ರಿಂದ 630ರ ವರೆಗೆ ಒಂದನೆಯ ಮಹೇಂದ್ರವರ್ಮನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಪಲ್ಲವ ವಾಸ್ತು ಶೈಲಿಯನ್ನು ‘ಮಹೇಂದ್ರ ವರ್ಮ ಶೈಲಿ’ ಎಂದು ಕರೆಯಲಾಗಿದೆ. ಒಂದನೆ ಮಹೇಂದ್ರವರ್ಮನು ಬೃಹತ್ ಬಂಡೆಗಲ್ಲು ಗಳಲ್ಲಿ ಗುಹಾ ದೇವಾಲಯಗಳನ್ನು ಕೊರೆಯಿಸಿ, ಗುಹಾಂತರ ದೇವಾಲಯಗಳ ಕಲ್ಪನೆ ಕೊಟ್ಟು, ಗುಹಾಂತರ ದೇವಾಲಯಗಳ ಮೂಲ ಪುರುಷನಾಗಿದ್ದಾನೆ. ಈ ಶೈಲಿಯ ದೇವಾಲಯಗಳು ಸರಳ ರೀತಿಯಲ್ಲಿದ್ದು ಇಟ್ಟಿಗೆ, ಗಾರೆ, ಮರ, ಮಣ್ಣು ಬೊಂಬು, ಲೋಹಗಳನ್ನು ಬಳಸದೇ ಕಟ್ಟಲಾಗಿದೆ. ಈ ಶೈಲಿಯ ದೇವಾಲಯಗಳು ದವಳನೂರು, ಮಂಡಗುಪ್ಪಟ, ಸಿತ್ತನ್ನವಾಸಲ್ ಮತ್ತು ಮಹೇಂದ್ರವಾಡಿಗಳಲ್ಲಿ ಕಂಡುಬರುತ್ತವೆ.

2. ಮಹಾಮಲ್ಲ ಶೈಲಿ : ಕ್ರಿ.ಶ. 630 ರಿಂದ 690 ರವರೆಗೆ ಮಹಾಮಲ್ಲ ಒಂದನೆ ನರಸಿಂಹವರ್ಮನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಪಲ್ಲವ ವಾಸ್ತುಶೈಲಿಯನ್ನು ‘ಮಹಾಮಲ್ಲ ಶೈಲಿ’ ಎಂದು ಕರೆಯಲಾಗಿದೆ. ಮೊದಲನೆಯ ಪ್ರಕಾರದ ಗುಹಾಂತರ ದೇವಾಲಯಗಳೊಂದಿಗೆ ಏಕಶಿಲಾರಥಗಳೆಂಬ ದೇವಾಲಯಗಳು ನಿರ್ಮಾಣಗೊಂಡವು. ಈ ಪ್ರಕಾರದ ವಾಸ್ತುಶಿಲ್ಪವು ಮಹಾಬಲಿಪುರಂ ಮತ್ತು ಕಂಚಿಯಲ್ಲಿ ಕಂಡು ಬರುತ್ತವೆ. ಮಹಾಬಲಿಪುರಂದಲ್ಲಿನ ‘ಗಂಗಾವತರಣ’ ಶಿಲ್ಪ ಅತ್ಯಂತ ಶ್ರೇಷ್ಠ ಕಲಾಕೃತಿ ಎಂದು ಪ್ರಸಿದ್ದಿ ಪಡೆದಿದೆ.

3. ರಾಜಸಿಂಹ ಶೈಲಿ : ಕ್ರಿ.ಶ. 690ರ ನಂತರ ರಾಜಸಿಂಹನ ಕಾಲದಲ್ಲಿ ನಿರ್ಮಾಣಗೊಂಡ ಪಲ್ಲವರ ವಾಸ್ತು ಶಿಲ್ಪ ಶೈಲಿಯನ್ನು ‘ರಾಜಸಿಂಹ ಶೈಲಿ’ ಎಂದು ಕರೆಯ ಲಾಗಿದೆ. ಈ ಕಾಲದಲ್ಲಿ ರಥಗಳೊಡನೆ ಬೃಹತ್ ಗೋಪುರವುಳ್ಳ ದೇವಾಲಯಗಳು ನಿರ್ಮಾಣ ಗೊಂಡವು. ಕಂಚಿಯ ಕೈಲಾಸನಾಥ ದೇವಾಲಯ ಮತ್ತು ಮಹಾಬಲಿಪುರದ ಕಡಲ ತೀರದ ದೇವಾಲಯಗಳು ಈ ಶೈಲಿಯ ಉತ್ತಮ ಉದಾಹರಣೆಗಳಾಗಿವೆ. ಇಲ್ಲಿಯ ದೇವಾಲಯಗಳಲ್ಲಿ ಪಲ್ಲವ ರಾಜ-ರಾಣಿಯರ ಪ್ರತಿಮೆಗಳನ್ನು ಕೆತ್ತಿದ್ದು ವಿಶೇಷವಾಗಿದೆ.

4. ಪರಾಜಿತ ಶೈಲಿ : ಕ್ರಿ.ಶ. 870 ರ ನಂತರ ಅಪರಾಜಿತವರ್ಮನ ಕಾಲದಲ್ಲಿ ನಿರ್ಮಾಣಗೊಂಡ ಪಲ್ಲವರ ವಾಸ್ತುಶಿಲ್ಪ ಶೈಲಿಯನ್ನು ‘ಅಪರಾಜಿತ ಶೈಲಿ’ ಎಂದು ಕರೆಯಲಾಗಿದೆ. ಈ ಶೈಲಿಯು ಬಹುತೇಕ ಚೋಳ ದೇವಾಲಯದ ವಾಸ್ತು ಶಿಲ್ಪ ಶೈಲಿಯನ್ನು ಹೋಲುತ್ತದೆ. ಬಾಹೂರಿನ ದೇವಾಲಯಗಳು ಈ ಶೈಲಿಯ ಉತ್ತಮ ಉದಾಹರಣೆಗಳಾಗಿವೆ.

ಕಂಚಿ : ಪಲ್ಲವರ ರಾಜಧಾನಿಯಾಗಿದ್ದ ಕಂಚಿ ದೇವಾಲಯಗಳ ಅಥವಾ ಗೋಪುರಗಳ ನಗರ ವೆಂದೇ ಪ್ರಸಿದ್ದಿ ಪಡೆದಿದೆ. ಕಂಚಿಯಲ್ಲಿ 350 ಕ್ಕೂ ಹೆಚ್ಚು ದೇವಾಲಯಗಳು ಕಂಡು ಬರುತ್ತವೆ. ಅವುಗಳಲ್ಲಿ 18 ಶೈವ ದೇವಾಲಯಗಳು, 18 ವೈಷ್ಣವ ದೇವಾಲಯಗಳು ಪ್ರಮುಖವಾಗಿವೆ. ಕಂಚಿಪುರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

1. ಶಿವಕಂಚಿ (ದೊಡ್ಡ ಕಂಚಿ) : ಇಲ್ಲಿ ಶೈವ ದೇವಾಲಯಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತವೆ.

2. ವಿಷ್ಣುಕಂಚಿ (ಸಣ್ಣ ಕಂಚಿ) : ಇಲ್ಲಿ ವಿಷ್ಣು ದೇವಾಲಯಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತವೆ.

3. ಜಿನಕಂಚಿ : ಇಲ್ಲಿ ಜೈನರ ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಕಂಚಿಯ ಏಕಾಂಬರೇಶ್ವರ ದೇವಾಲಯ ಭವ್ಯತೆಗೆ ಹೆಸರಾಗಿದ್ದು, 1000 ಕಂಬಗಳನ್ನು, 1008 ಲಿಂಗಗಳನ್ನು, 63 ಶೈವ ಸಂತರ ಶಿಲ್ಪಗಳನ್ನು ಹೊಂದಿದೆ. ಇದನ್ನು ಸಹಸ್ರಲಿಂಗೇಶ್ವರ ದೇವಾಲಯವೆಂದೂ ಕರೆಯಲಾಗಿದೆ. ಇಲ್ಲಿಯ ವರದರಾಜ ಸ್ವಾಮಿ ದೇವಾಲಯ ಬೃಹತ್ ದೇವಾಲಯವಾಗಿದ್ದು 9 ಅಂತಸ್ತಿನ, 50 ಮೀಟರ್ ಎತ್ತರದ ಗೋಪುರವನ್ನು ಹೊಂದಿದೆ.

ಇದು ವಿಜಯನಗರ ಕಾಲದ ನಿರ್ಮಾಣವೆಂದು ತಿಳಿಯಲಾಗಿದೆ. ಗೋಪುರದ ವಿಮಾನ ಚಿನ್ನದ ತಗಡಿನ ಹೊದಿಕೆಯನ್ನು ಹೊಂದಿದೆ. ಕಂಚಿಯ ಕೈಲಾಸನಾಥ ಹಾಗೂ ವೈಕುಂಠ ಪೆರುಮಾಳ್ ದೇವಾಲಯಗಳು 8ನೇ ಶತಮಾನದ ಕಲಾಕೃತಿಗಳಾಗಿವೆ. ಇವು ಇಮ್ಮಡಿ ನರಸಿಂಹವರ್ಮನ ಕಾಲದಲ್ಲಿ ನಿರ್ಮಾಣಗೊಂಡಿದ್ದು ಮುಖಮಂಟಪ, ಸಭಾಮಂಟಪ, ಗರ್ಭಗೃಹಗಳನ್ನೊಳ ಗೊಂಡಿದೆ.

“ಈ ದೇವಾಲಯದ ವಾಸ್ತುಶಿಲ್ಪ ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಅಧ್ಯಯನಕ್ಕೆ ಅಡಿಗಲ್ಲಾಗಿದೆ’ ಎಂದು ಪರ್ಸಿಬ್ರೌನ್ ಅಭಿಪ್ರಾಯಪಟ್ಟಿದ್ದಾರೆ. ನಂದಿವರ್ಮ ಕಾಲದಲ್ಲಿ ನಿರ್ಮಾಣಗೊಂಡ ವೈಕುಂಠ ಪರುಮಾಳ್ ದೇವಾಲಯ ಪಲ್ಲವ ಶೈಲಿಯ ವಿಕಾಸ ಮತ್ತು ಉತ್ಕೃಷ್ಟತೆಯ ಸಂಕೇತವಾಗಿದೆ ಇದು ದ್ವಾರಮಂಟಪ, ಸಭಾಮಂಟಪ, ಗರ್ಭಗೃಹಗಳ ನ್ನೊಳಗೊಂಡಿದ್ದು, ಕೈಲಾಸನಾಥ ದೇವಾಲಯಕ್ಕಿಂತ ವಿಶಾಲವಾಗಿದೆ.

ಕಂಚಿಯ ಇತರೇ ಪ್ರಮುಖ ದೇವಾಲಯಗಳೆಂದರೆ ಕಾಮಾಕ್ಷಿ, ಮುತ್ತೀಶ್ವರ, ಕಾಮ ಕೋಟಿ, ವರದರಾಜ, ಮಹಾಬಲೇಶ್ವರ, ಪುಣ್ಯಕೋಟಿ, ಪಣಮೇಶ್ವರ, ಸರ್ವ ತೀರ್ಥೇಶ್ವರ, ಚೊಕ್ಕನಾಥೇಶ್ವರ, ತ್ರೈಲೋಕ್ಯನಾಥ, ಸುಬ್ರಹ್ಮಣ್ಯ ಮುಂತಾದವುಗಳು.

ಮಹಾಬಲಿಪುರಂ (ರಥಗಳು) : ಪಲ್ಲವರ ವಾಸ್ತುಶಿಲ್ಪಕಲೆಯ ಕೇಂದ್ರವಾದ ಮಹಾಬಲಿಪುರಂ ಮದ್ರಾಸಿನ ಹತ್ತಿರ ಪಾಲಾರ್ ನದಿ ತೀರದಲ್ಲಿದೆ. ಮಹಾಬಲಿಪುರಂ ಒಂದನೇ ನರಸಿಂಹವರ್ಮನ ಕಾಲದಲ್ಲಿ ಪಲ್ಲವರ ರಾಜಧಾನಿಯಾಗಿದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಸ್ಮಾರಕಗಳು ನಿರ್ಮಾಣಗೊಂಡವು.

ಶಿಲಾಗುಡ್ಡದಲ್ಲಿ ಕೆತ್ತಲಾದ ಹತ್ತು ಮಂಟಪಗಳು ರಚನೆ ಮತ್ತು ವಿನ್ಯಾಸಕ್ಕೆ ಪ್ರಸಿದ್ಧವಾಗಿವೆ. ಇಲ್ಲಿಯ ವರಹ ಮಂಟಪ ಮತ್ತು ಮಹಿಷಾಸುರ ಮರ್ಧಿನಿ ಮಂಟಪಗಳಲ್ಲಿ ಕೆತ್ತಿರುವ ಶಿಲ್ಪಗಳು ಭವ್ಯವಾಗಿವೆ. ಧರ್ಮರಾಜ ಮಂಟಪ, ಕೃಷ್ಣ ಮಂಟಪ, ಪಂಚಪಾಂಡವ ಮಂಟಪಗಳಲ್ಲಿ ಕೆತ್ತಿರುವ ಶಿಲ್ಪಿಗಳು ಜೀವಕಳೆಯಿಂದ ಕೂಡಿವೆ.

ವರಹ ಮಂಟಪದಲ್ಲಿ ಕೆತ್ತಲಾಗಿರುವ ವಿಷ್ಣುವಿನ ವರಹಅವತಾರ, ವಾಮನ ಅವತಾರ, ಗಜಲಕ್ಷ್ಮಿ ದುರ್ಗಿ, ಸೂರ್ಯ, ಸಿಂಹ, ವಿಷ್ಣು 1 ನೇ ಮಹೇಂದ್ರವರ್ಮನ್ ಮತ್ತು ಅವನ ಠಾಣೆಯ ಶಿಲ್ಪಿಗಳು ಮನೋಜ್ಞವಾಗಿವೆ.

ಮತ್ತು ಅನಂತಶಯನ, ಮಹಿಷಾಸುರ ಮರ್ಧಿನಿ, ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿಹಿಡಿದಿರುವ ಶಿಲ್ಪಗಳು ಭವ್ಯವಾಗಿವೆ. ಇಲ್ಲಿಯ ಶೇಷಶಯನ ವಿಷ್ಣು ಮತ್ತು ‘ಅರ್ಜುನನ ತಪಸ್ಸು’ ಎಂದು ಹೆಸರಿಸಲಾಗಿರುವ ಶಿಲ್ಪ ಪಲ್ಲವರ ಶ್ರೇಷ್ಠ ಕಲಾಕೃತಿಗಳಾಗಿದ್ದು,ಶಿಲ್ಪ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿವೆ. ಈ ಶಿಲ್ಪವನ್ನು “ಶಿಲ್ಪ ಕಲಾ ರಾಶಿಯಲ್ಲಿ ಮೇರು ಕಲಾಕೃತಿ” ಎಂದು ನಿರ್ಣಯಿಸಲಾಗಿದೆ.

ಈ ಶಿಲ್ಪದಲ್ಲಿ ತಪಸ್ಸಿನಲ್ಲಿರುವ ಅರ್ಜುನ, ತಪಸ್ಸಿನಲ್ಲಿ ಮಗ್ನನಾಗಿರುವ ಭಗೀರಥ, ತಪಸ್ಸಿನಲ್ಲಿ ತೊಡಗಿರುವ ಬೆಕ್ಕು, ನಿರ್ಭಯವಾಗಿ ಓಡಾಡುವ ಇಲಿಗಳು, ಜಿಂಕೆಗಳು, ಪಲ್ಲವರ ಲಾಂಛನವಾದ ಸಿಂಹ, ನಾಗ ನಾಗಿಣಿಯರು, ಗಂಧರ್ವರು, ಮಂಗಗಳ ಸಂಸಾರ ಮುಂತಾದವುಗಳು ಅತ್ಯಂತ ನೈಜವಾಗಿ ಚಿತ್ರಿತವಾಗಿವೆ. ಭಾರತದ ಶಿಲ್ಪ ಕ್ಷೇತ್ರದಲ್ಲಿಯೇ ಅಪೂರ್ವವಾದ ಈ ಶಿಲ್ಪಕಲೆಯನ್ನು “ಗಂಗಾವತರಣ” ಎಂದೂ ಕರೆಯಲಾಗಿದೆ.

ಮಹಾಬಲಿಪುರಂದ ಕಡಲ ತೀರದಲ್ಲಿ ನಿರ್ಮಿಸಲಾದ ಶಿಲಾರಥಗಳು ಪಲ್ಲವ ರಾಜರ ಹೆಸರನ್ನು ಇತಿಹಾಸದಲ್ಲಿ ಅಮರಗೊಳಿಸಿವೆ. ಈ ಶಿಲಾರಥಗಳು ‘ಪಗೋಡ’ಗಳೆಂದೇ ಜಗತಸಿದ್ಧಿಯಾಗಿವೆ. ಪಿರಮಿಡ್ಡಿನಾಕೃತಿಯ ಹೋಲಿಕೆಯಲ್ಲಿರುವ 8 ಶಿಲಾರಥಗಳು ಇಲ್ಲಿವೆ.

ಅವುಗಳನ್ನು ಧರ್ಮರಾಜ ರಥ, ಭೀಮ ರಥ, ಅರ್ಜುನ ರಥ, ನಕುಲ ರಥ, ಸಹದೇವ ರಥ, ದೌಪದಿ ರಥ, ಗಣೇಶ ರಥ ಮತ್ತು ಮೊಳ್ಳೆಯನ್ಕುಟ್ಟಿ ರಥಗಳೆಂದು ಕರೆಯಲಾಗಿದೆ. ಪ್ರತಿಯೊಂದು ರಥವನ್ನು ಒಂದೇ ಅಖಂಡ ಶಿಲೆಯಲ್ಲಿ ನಿರ್ಮಿಸಲಾಗಿದೆ. ಹೀಗೆ ದ್ರಾವಿಡ ಶೈಲಿಯ ನಿರ್ಮಾಪಕರಾದ ಪಲ್ಲವರು ಭಾರತೀಯ ಶಿಲ್ಪ ಕಲಾಕ್ಷೇತ್ರಕ್ಕೆ ಅಮರವಾದ ಕೊಡುಗೆ ನೀಡಿದ್ದಾರೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

3 thoughts on “Contribution of Pollava: ಪಲ್ಲವರ ಕೊಡುಗೆಗಳು ನೋಟ್ಸ್-01”

Leave a Comment