Allama Prabhu Devara Vachanagalu: Summary of the poem-03
Allama Prabhu: ಅಲ್ಲಮ ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾನೆ. ಪಂಚೇಂದ್ರಿಯಗಳು ಒಂದಕ್ಕೊಂದು ಸಮವಿಲ್ಲ, ಪಂಚೇಂದ್ರಿಯಗಳಾದ ಕಣ್ಣು (ಸುಂದರವಾದುದನ್ನು ಕಾಣುವುದು), ಕಿವಿ (ನಮಗೆ ಹಿತವಾದುದನ್ನು ಕೇಳಲು ತವಕಿಸುವುದು), ಮೂಗು (ಸುಗಂಧವನ್ನು ಆಘ್ರಾಣಿಸುವುದು). ನಾಲಿಗೆ (ರುಚಿಯಾದುದನ್ನು ಸವಿ ನೋಡುವುದು) ಮತ್ತು ಚರ್ಮ (ಹಿತವಾದುದನ್ನು ಸ್ಪರ್ಷಿಸುವುದು) ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು ಎಂದಿದ್ದಾನೆ.
ಹೊಟ್ಟೆಯ ಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹಸಿವು ಹೋಗುವುದೇ? ಶರೀರದ ಮೇಲೆ ಲಿಂಗವ ಧರಿಸಿದರೆ ಧರಿಸಿದವ ಭಕ್ತನಾಗಬಲ್ಲನೆ? ಪೊದೆಯ ಮೇಲೆ ಇಟ್ಟ ಕಲ್ಲು ಲಿಂಗವಾಗಬಲ್ಲುದೆ? ಪೊದೆ ಭಕ್ತನಾಗಬಲ್ಲುದೇ, ಪೊದೆಯ ಮೇಲೆ ಕಲ್ಲು ಇಟ್ಟಾತ ಗುರುವಾಗಬಲ್ಲನೆ? ಈ ರೀತಿಯ ವೇಷಧಾರಿಗಳನ್ನು ಕಂಡು ನಾಚುವೆ ಎಂದು ಅಲ್ಲಮಪ್ರಭು ಹೇಳುತ್ತಾನೆ. ಹಸಿವಾದಾಗ ಅನ್ನ ತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ ಎಂದೂ, ಲಿಂಗದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ ಎಂದು, ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.
ಯಾರು ಹಸಿದಾಗ ಅನ್ನವನ್ನು ಕೊಟ್ಟು, ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವ ಸಮಾನ ಅಥವಾ ದೇವರು ಎಂದು ಹೇಳುವ ಅಲ್ಲಮ ಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ ಎಂದು ಕೇಳುತ್ತಾನೆ.
ಸಂದರ್ಭ ಸೂಚಿಸಿ ವಿವರಿಸಿರಿ :
1. ಬಂಡಿಯ ಹೊಡೆವವರೈವರು ಮಾನಿಸರು.
ಆಯ್ಕೆ : ಈ ವಾಕ್ಯವನ್ನು ಅಲ್ಲಮಪ್ರಭುವಿನ ವಚನಗಳಿಂದ ಆರಿಸಲಾಗಿದೆ.
ಸಂದರ್ಭ: ವಚನಕಾರ ಪಂಚೇಂದ್ರಿಯಗಳ ಕುರಿತಾಗಿ ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ : ಅಲ್ಲಮನು ಪಂಚೇಂದ್ರಿಯಗಳನ್ನೇ ದೇಹವೆಂಬ ಬಂಡಿಯ ಚಾಲಕರು ಎಂದು ಕರೆದಿದ್ದಾನೆ.
ಪಂಚೇಂದ್ರಿಯಗಳು ತಮ್ಮ ಕಾರ್ಯಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.
2. ಮೆಳೆ ಭಕ್ತನೆ ? ಇಟ್ಟಾತ ಗುರುವೆ ?
ಆಯ್ಕೆ : ಈ ವಾಕ್ಯವನ್ನು ಅಲ್ಲಮಪ್ರಭುವಿನ ವಚನಗಳಿಂದ ಆರಿಸಲಾಗಿದೆ.
ಸಂದರ್ಭ : ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂದು ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ: ಹಸಿವಾದಾಗ ಅನ್ನತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆಯ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ? ಎಂದೂ. ಲಿಂಗದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ? ಎಂದು. ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ? ಎಂದು ಪ್ರಶ್ನಿಸುತ್ತಾ ಈ ಮೇಲಿನಂತೆ ಹೇಳುತ್ತಾನೆ.
3. ನೀ ದೇವನಾದಡೆ ಎನ್ನನೇಕೆ ಸಲಹೆ?
ಆಯ್ಕೆ : ಈ ವಾಕ್ಯವನ್ನು ಅಲ್ಲಮಪ್ರಭುವಿನ ವಚನಗಳಿಂದ ಆರಿಸಲಾಗಿದೆ.
ಸಂದರ್ಭ: ವಚನಕಾರ ದೇವರನ್ನು ಪ್ರಶ್ನಿಸುವ ಸಂದರ್ಭ ಇದಾಗಿದೆ.
ವಿವರಣೆ : ಯಾರು ಹಸಿದಾಗ ಅನ್ನವನ್ನು ಕೊಟ್ಟು, ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನರು ಅಥವಾ ದೇವರು ಎಂದು ಹೇಳುವ ಅಲ್ಲಮಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ, ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ? ಎಂದು ದೇವರನ್ನೇ ಕೇಳುತ್ತಾನೆ.
ಒಂದು ವಾಕ್ಯದಲ್ಲಿ ಉತ್ತರಿಸಿ :
1 ಅಲ್ಲಮಪ್ರಭುವಿನ ಅಂಕಿತ ಯಾವುದು ?
ಗುಹೇಶ್ವರಾ ಎಂಬುದು ಅಲ್ಲಮ ಪ್ರಭುವಿನ ಅಂಕಿತವಾಗಿದೆ.
ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ ?
ಕಾಲುಗಳನ್ನು ಗಾಲಿಗೆ ಹೋಲಿಸಲಾಗಿದೆ.
3 ದೇಹವೆಂಬುದು ಏನು ?
ದೇಹವೆಂಬುದನ್ನು ತುಂಬಿದ ಬಂಡಿ ಎಂದು ಅಲ್ಲಮಪ್ರಭು ಕರೆದಿದ್ದಾನೆ.
ಕಟ್ಟೋಗರದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ?
ಕಟ್ಟೋಗರದ ಮೊಟ್ಟೆಯನ್ನು ಹೊಟ್ಟೆಯ ಮೇಲೆ ಕಟ್ಟಲಾಗಿದೆ.
5 ಇಟ್ಟ ಕಲ್ಲು ಎಲ್ಲಿ ಸಿಕ್ಕರೆ ಲಿಂಗವೆಂದು ಕೇಳುತ್ತಾನೆ ?
ಇಟ್ಟಕಲ್ಲು ಪೊದೆಯ ಮೇಲೆ ಸಿಕ್ಕರೆ ಲಿಂಗವೇ ಎಂದು ಕೇಳುತ್ತಾನೆ.
6 ಹಸಿದಾಗ ಏನನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ ?
ಹಸಿದಾಗ ಒಂದು ತುತ್ತು ಅನ್ನವನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ.
ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ :
1. ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ?
ಕಾಲುಗಳನ್ನು ಗಾಲಿಗೂ, ದೇಹವನ್ನು ತುಂಬಿದ ಬಂಡಿಗೂ ಹೋಲಿಸಲಾಗಿದೆ. ಈ ಬಂಡಿಯನ್ನು ನಡೆಸುವವರು ಐದು ಜನ ಇಲ್ಲಿ ದೇಹದ ಪಂಚೇಂದ್ರಿಯಗಳೇ ಚಾಲಕರಾಗಿದ್ದಾರೆ. ಅವರ ಇಚ್ಛೆಯನ್ನು ಅರಿತು ಮುನ್ನಡೆದರೆ ಬಂಡಿಯ ಅಚ್ಚು ಮುರಿಯುತ್ತದೆ ಎಂದಿದ್ದಾನೆ.
2. ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು?
ಶಿವನ ಪ್ರತೀಕವಾದ ಲಿಂಗವನ್ನು ಧರಿಸಿ ದೃಢಭಕ್ತಿ ಇಲ್ಲದೆ ಆಡಂಬರದ ಭಕ್ತಿಯನ್ನು ತೋರಿಸುವ ಭಕ್ತನನ್ನು ಮತ್ತು ಅಲ್ಪಜ್ಞಾನದ ಗುರುವನ್ನು ಕಂಡರೆ ನಾಚುವೆನೆಂದು ಅಲ್ಲಮ ಹೇಳುವನು.
3. ಅಲ್ಲಮ ಏನನ್ನು ನೀಡುವುದರಿಂದ ನಾದೇವ ಎಂದು ಹೇಳುತ್ತಾನೆ ?
ಹಸಿದಾಗ ಅನ್ನವನ್ನು ನೀಡುವ, ಬಾಯಾರಿದಾಗ ನೀರನ್ನು ಕೊಡುವ ನಾನೇ ದೇವನು, ನೀನು ದೇವನೇ ಆಗಿದ್ದರೆ ನನ್ನನ್ನು ಏತಕ್ಕೆ ಸಲಹುತ್ತಿಲ್ಲ ಎಂದು ಅಲ್ಲಮಪ್ರಭು ದೇವರನ್ನೇ ಪ್ರಶ್ನಿಸುವ ಧೈರ್ಯ ತೋರಿದ್ದಾನೆ.
ಐದಾರು ವಾಕ್ಯಗಳಲ್ಲಿ ಉತ್ತರಿಸಿ.
1. ದೇಹವೆಂಬ ಬಂಡಿಯನ್ನು ಹೇಗೆ ನಡೆಸಬೇಕೆಂದು ತಿಳಿಸಲಾಗಿದೆ?
ಅಲ್ಲಮ ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾರೆ. ಈ ಐದು ಜನ ಯಾರೆಂದರೆ ನಾವು ಹೊಂದಿರುವ ಪಂಚೇಂದ್ರಿಯಗಳು. ಇವುಗಳಲ್ಲಿ ಕಣ್ಣು ಕಾಣುವ ಕಾಯಕವನ್ನು, ಕಿವಿ ಕೇಳುವ ಗುಣವನ್ನು, ಮೂಗು ಸುಗಂಧವನ್ನು ಆಘ್ರಾಣಿಸುವ, ನಾಲಿಗೆ ಸವಿ ನೋಡುವ ಮತ್ತು ಚರ್ಮ ಹಿತವಾದುದನ್ನು ಸ್ಪರ್ಷಿಸುವ ಕಾರ್ಯಮಾಡುತ್ತವೆ. ಆದರೆ ಇವುಗಳನ್ನು ಅವಷ್ಟಕ್ಕೆ ಬಿಟ್ಟರೆ ನಮ್ಮ ದೇಹವೆಂಬ ಬಂಡಿಯ ಅಚ್ಚು ಮುರಿದು ಹೋಗುತ್ತದೆ. ಹಾಗಾಗಿ ಅವುಗಳನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸ ಬೇಕು, ಜೊತೆಗೆ ಭಗವಂತನ ಕೃಪೆಗೆ ಪಾತ್ರವಾಗಬೇಕು ಎಂದಿದ್ದಾರೆ.
2. ಆಡಂಬರದ ಭಕ್ತಿಯನ್ನು ಅಲ್ಲಮ ಹೇಗೆ ಖಂಡಿಸುತ್ತಾನೆ?
ಅಲ್ಲಮಪ್ರಭು ವೇಷಧಾರಿಗಳನ್ನು ಕಂಡೊಡೆ ನಾಚುವೆ ಎಂದು ಹೇಳುತ್ತಾನೆ. ಹಸಿವಾದಾಗ ಅನ್ನ ತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ ಎಂದೂ, ಲಿಂಗ ದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ ಎಂದು. ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬುದು ಅಲ್ಲಮನ ಮನೋಭಾವ,
3. ಅಲ್ಲಮಪ್ರಭುವಿನ ವಚನಗಳ ಆಶಯಗಳೇನು?
ಅಲ್ಲಮ ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾರೆ. ಪಂಚೇಂದ್ರಿಯಗಳು ಒಂದಕ್ಕೊಂದು ಸಮವಿಲ್ಲ, ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು ಎಂದಿದ್ದಾರೆ.
ಹೊಟ್ಟೆಯ ಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹಸಿವು ಹೋಗುವುದೇ? ಶರೀರದ ಮೇಲೆ ಲಿಂಗವ ಧರಿಸಿದರೆ ಧರಿಸಿದವ ಭಕ್ತನಾಗಬಲ್ಲನೆ? ಪೊದೆಯ ಮೇಲೆ ಇಟ್ಟಕಲ್ಲು ಲಿಂಗವಾಗಬಲ್ಲುದೆ? ಪೊದೆ ಭಕ್ತನಾಗಬಲ್ಲುದೇ, ಪೊದೆಯ ಮೇಲೆ ಕಲ್ಲು ಇಟ್ಟಾತ ಗುರುವಾಗಬಲ್ಲನೆ? ಈ ರೀತಿಯ ವೇಷಧಾರಿಗಳನ್ನು ಕಂಡು ನಾಚುವೆ ಎಂದು ಅಲ್ಲಮಪ್ರಭು ಹೇಳುತ್ತಾನೆ. ಹಸಿವಾದಾಗ ಅನ್ನ ತಿನ್ನಬೇಕೇ ಹೊರತು ಅನ್ನದ ಗಂಟನ್ನು ಹೊಟ್ಟೆ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗ ಧರಿಸಿ ಮೆರೆಯುವವನಿಗೆ ನೀನು ಭಕ್ತನೇ ಎಂದೂ, ಲಿಂಗ ದೀಕ್ಷೆ ಕೊಡುವ ಗುರುವಿಗೂ ನೀನು ಗುರುವೇ ಎಂದು, ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.
ಯಾರು ಹಸಿದಾಗ ಅನ್ನವನ್ನುಕೊಟ್ಟು, ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನ ಅಥವಾ ದೇವರು ಎಂದು ಹೇಳುವ ಅಲ್ಲಮ ಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ ಎಂದು ಕೇಳುತ್ತಾನೆ.
………………..